ಸಕಲೇಶಪುರ: ತಾಲ್ಲೂಕಿನ ಮನೆಗಳು ಹಾಗೂ ನ್ಯಾಯಬೆಲೆ ಅಂಗಡಿಗಳ ಮೇಲೆ ದಾಳಿ ನಡೆಸಿ ಭತ್ತವನ್ನು ಹೊತ್ತೊಯ್ಯುತ್ತಿದ್ದ ಮಕನ ಕಾಡಾನೆಯನ್ನು ಇಂದು ಅರಣ್ಯ ಇಲಾಖೆ ಸೆರೆ ಹಿಡಿದಿದ್ದಾರೆ. ನಿನ್ನೇ ಸಂಜೆ ಸಹ ಮಕನ ಕಾಡಾನೆಯು ಕೊಲ್ಲಹಳ್ಳಿ ಗ್ರಾಮದಲ್ಲಿ ಸಮೀಪದ ನ್ಯಾಯಬೆಲೆ ಅಂಗಡಿಯಿಂದ ಅಕ್ಕಿ ಚೀಲವನ್ನು ತೆಗೆದು ಬಿ ಎಂ ರಸ್ತೆಯಲ್ಲಿ ತಿನ್ನುವುದನ್ನು ನೋಡಿ ಗ್ರಾಮಸ್ಥರು ಭಯಗೊಂಡಿದ್ದರು.ಈ ಮಕನ ಆನೆಯನ್ನು ಕೊಲ್ಲಹಳ್ಳಿ ಸಮೀಪದ ಹೂಸೂರಿನಲ್ಲಿ ಇಂದು ಅರಣ್ಯ ಇಲಾಖೆ ಸಿಬ್ಬಂದಿಗಳು ಸೆರೆ ಹಿಡಿದಿದ್ದಾರೆ .ಸ್ಥಳಕ್ಕೆ ಬೇಟಿ ನೀಡಿದ ಸಕಲೇಶಪುರ ಆಲೂರು ಕಟ್ಟಾಯ ವಿಧಾನಸಭಾ ಕ್ಷೇತ್ರದ ಶಾಸಕರಾದ ಸಿಮೆಂಟ್ ಮಂಜುರವರು ಅಭಿನಂದನೆ ಸಲ್ಲಿಸಿದ್ದಾರೆ.ಈ ಸಂದರ್ಭದಲ್ಲಿ ಡಿ.ಫ್.ಓ ಹರೀಶ್, ಎಸಿಫ್ ಸುರೇಶ್ ,ವಲಯ ಅರಣ್ಯ ಅಧಿಕಾರಿ ಶಿಲ್ಪ ,ಅರಿವಳಿಕೆ ತಜ್ಞರು ಹಾಗೂ ಸಿಬ್ಬಂದಿಗಳು ಕಾರ್ಯಚರಣೆಯಲ್ಲಿ ಉಪಸ್ಥಿತರಿದ್ದರು .