ಸಕಲೇಶಪುರ : ಹೆತ್ತೂರು ಪಂಚಾಯಿತಿ ವ್ಯಾಪ್ತಿಯ ಗುಂಡಿಗೆರೆ ಗ್ರಾಮದ ಸಾರ್ವಜನಿಕ ಬಸ್ ಸ್ಟ್ಯಾಂಡ್ ಪರಿಸ್ಥಿತಿ, ರಸ್ತೆ ಕಾಮಗಾರಿ ಮುಗಿದು ಒಂದು ವರ್ಷ ಕಳೆದರೂ ಬಸ್ ಸ್ಟಾಂಡ್ ನ ಮುಂಭಾಗ ಮೋರಿ ನಿರ್ಮಾಣ ಮಾಡದೆ ಶಾಲಾ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಪರದಾಡುವ ಪರಿಸ್ಥಿತಿ, ಅದೂ ಸಾಲದೆ ಜೆ ಜೆ ಎಂ ಯೋಜನೆಯಡಿ ಕುಡಿಯುವ ನೀರಿಗಾಗಿ ಬಸ್ ಸ್ಟ್ಯಾಂಡ್ ಪಕ್ಕದಲ್ಲಿ ಬೋರ್ವೆಲ್ ಹಾಗೂ 5 ಅಡಿ, ಚರಂಡಿಯನ್ನು ತೆಗೆದು ವ್ಯವಸ್ಥಿತವಾಗಿ ಮುಚ್ಚದೆ ಸಾರ್ವಜನಿಕರು ತೊಂದರೆ ಅನುಭವಿಸುವಂತಾಗಿದೆ,
ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳನ್ನು ಸತತ ಎರಡು ತಿಂಗಳಿಂದ ಸಂಪರ್ಕಿಸಿದರೂ ಕೆಲಸ ಮಾಡಿಸುವ ಉತ್ತರವನ್ನು ನೀಡುತ್ತಿರುತ್ತಾರೆ, ಪರ್ಯಾಯ ವ್ಯವಸ್ಥೆಯಾಗಿ ಗ್ರಾಮಸ್ಥರೇ ತಾತ್ಕಾಲಿಕವಾಗಿ ಸಿಮೆಂಟ್ ಮೋರಿ ವ್ಯವಸ್ಥೆ ಮಾಡಿಕೊಳ್ಳಲಾಗಿದೆ, ಸಂಬಂಧಪಟ್ಟ ಅಧಿಕಾರಿಗಳು ಸೂಕ್ತ ಪರಿಹಾರ ನೀಡಬೇಕು ಎಂದು ಉದಯ್ ಆಗ್ರಹಿಸಿದ್ದಾರೆ.