ಸಕಲೇಶಪುರ :- ತಾಲ್ಲೂಕಿನ ಹೆತ್ತೂರು ಹೋಬಳಿಯ ವಳಲಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಿರಿದನಹಳ್ಳಿ ,ಮೊಗನಹಳ್ಳಿ ಹಾಗೂ ಹೊಸಳ್ಳಿ ಗ್ರಾಮದಲ್ಲಿ ಸುಮಾರು 200ಕ್ಕೂ ಹೆಚ್ಚು ಮನೆಗಳಿದ್ದು, ವಿದ್ಯಾರ್ಥಿಗಳು ಹಾಗೂ ವೃದ್ದರೂ ಸೇರಿದಂತೆ 500 ಕ್ಕೂ ಹೆಚ್ಚು ಜನ ವಾಸವಾಗಿರುತ್ತಾರೆ. ಈ ಗ್ರಾಮಗಳಲ್ಲಿ ಬಹುತೇಕ ಜನರು ಬಿ.ಎಸ್.ಎನ್.ಎನ್‌ ಗ್ರಾಹಕರಾಗಿದ್ದು,ಈ ಗ್ರಾಮಸ್ಥರಿಗೆ ಬಿ.ಎಸ್.ಎನ್.ಎಲ್ ಸೇರಿದಂತೆ ಇತರೆ ಯಾವುದೇ ನೆಟ್ವವರ್ಕ್ ಸಿಗದೆ ಪ್ರತಿನಿತ್ಯ ಸಮಸ್ಯೆಯನ್ನು ಎದುರಿಸುವಂತಾಗಿದೆ.

ಈ ಗ್ರಾಮಗಳಿಂದ 2ಕಿ.ಮೀ ವ್ಯಾಪ್ತಿಯಲ್ಲಿ ಡ್ಯಾಮ್‌ ಇದ್ದು ಅನೇಕ ಕೈಗಾರಿಕ ಕೆಲಸಗಳು ಪ್ರತಿದಿನ ನಡೆಯುತ್ತಿದ್ದು, ನೆಟ್‌ವರ್ಕ್‌ ಸಮಸ್ಯೆಯಿಂದ ಗ್ರಾಮಸ್ಥರು ಸೇರಿದಂತೆ ಕೂಲಿ ಕಾರ್ಮಿಕರು, ಅಧಿಕಾರಿಗಳು ಈ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ. ಇದರಿಂದ ಕೂಡಲೆ ಬಂದು ಹೊಸ ಬಿ.ಎಸ್.ಎನ್.ಎಲ್‌ ನೆಟ್‌ವರ್ಕ್‌ ಟವರ್‌ನ್ನು ನಿರ್ಮಿಸಿಕೊಡಬೇಕಾಗಿ ಗ್ರಾಮಸ್ಥರು ಶಾಸಕರಾದ ಸಿಮೆಂಟ್ ಮಂಜುನಾಥ್,ಉಪ ವಿಭಾಗಧಿಕಾರಿಗಳಿಗೆ ಹಾಗೂ ಹಾಸನ ಜಿಲ್ಲಾ ಬಿ. ಎಸ್. ಏನ್ ಎಲ್ ಕಚೇರಿಯ ಡಿಜಿಎಂ ಗೆ ಮನವಿ ಸಲ್ಲಿಸಿದರು.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *