![](https://tv46malenadudigital.com/wp-content/uploads/2023/10/ZomboDroid_29102023095939-1024x904.jpg)
ಸಕಲೇಶಪುರ : ಇಂದು ಭಾರತೀಯ ಕಾಫಿ ಮಂಡಳಿಯ ನೂತನ ಅಧ್ಯಕ್ಷರಾದ ಭಾರತೀಯ ಜನತಾ ಪಾರ್ಟಿಯ ಕಿಸಾನ್ ಮೋರ್ಚಾದ ರಾಷ್ಟ್ರೀಯ ಕಾರ್ಯಕಾರಿಣಿ ಸದಸ್ಯರು , ಕೃಷಿಕ ಪತ್ರಿಕೆಯ ಸಂಪಾದಕರು ಮತ್ತು ಕಾಫಿ ಬೆಳೆಗಾರರಾದ ಎಂ ಜೆ ದಿನೇಶ್ ದೇವರುಂದ ಇವರನ್ನು ಸಕಲೇಶಪುರ ಮಂಡಲದ ಅಧ್ಯಕ್ಷರಾದ ಮಂಜುನಾಥ್ ಸಂಘಿ ಅವರ ನೇತೃತ್ವದಲ್ಲಿ ದೇವಾಲದಕೆರೆ ಶಕ್ತಿ ಕೇಂದ್ರದ ವತಿಯಿಂದ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷರಾದ ಡಿಕೆ ಭರತ್ ಮಂಡಲ ರೈತ ಮೋರ್ಚ ಪ್ರಧಾನ ಕಾರ್ಯದರ್ಶಿ, ಹೃಷಿಕೇಶ್ ಮಂದಾರ ಉಪಾಧ್ಯಕ್ಷರಾದ ಅರುಣ್ ಅಚ್ಚನಹಳ್ಳಿ ಹಾನುಬಾಳು ಮಹಾಶಕ್ತಿ ಕೇಂದ್ರದ ಕಾರ್ಯದರ್ಶಿ ಅನಿಲ್ ಸಂಪಗೂಡು ಮುಖಂಡರಾದ ಸುನಿಲ್ ದೇವಾಲದಕೆರೆ, ಅಭಿಷೇಕ್, ಕುಮಾರಹಳ್ಳಿ,ಲೋಕೇಶ್ ಮಗಜಹಳ್ಳಿ ಉಪಸ್ಥಿತರಿದ್ದರು.
![](https://tv46malenadudigital.com/wp-content/uploads/2023/10/ZomboDroid_29102023095939-1-1024x904.jpg)