
ಸಕಲೇಶಪುರ : ಪಟ್ಟಣದ ಪುರಭವನದಲ್ಲಿ ಇಂದು ಸಕಲೈಶ್ವರ್ಯ ವಿಶೇಷ ಚೇತನರ ಹಾಗೂ ಪೋಷಕರ ಒಕ್ಕೂಟ ಸಂಘದ ವತಿಯಿಂದ ಪಟ್ಟಣದ ಪುರಭವನದಲ್ಲಿ ವಿಶ್ವ ವಿಶೇಷಚೇತನರ ದಿನಾಚರಣೆಯನ್ನು ಆಚರಿಸಲಾಯಿತು.
ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷರಾದ ಎಂ ಎಲ್ ಯೋಗೇಶ್ ರವರು ವಯಿಸಿದ್ದರು.ಭಾರತ್ ಸರ್ಕಾರದ ಕೇಂದ್ರ ವಾಣಿಜ್ಯ ಮಂತ್ರಾಲಯ, ಸಂಬಾರ ಮಂಡಳಿಯ ಉಪಾಧ್ಯಕ್ಷರಾದ ಎಸ್ ಕೆ ಸತ್ಯನಾರಾಯಣರವರು ಕಾರ್ಯಕ್ರಮದ ಉದ್ಘಾಟನೆ ಮಾಡಿದರು.
ಈ ಸಂದರ್ಭದಲ್ಲಿ ವಿಶೇಷ ಆಹ್ವಾನಿತರಾಗಿ ಯಡೆಹಳ್ಳಿ ಮಂಜುನಾಥ್ , ಶಾರದಾ ಗುರುಮೂರ್ತಿ, ಕಟ್ಟೆಗದ್ದೆ ನಾಗರಾಜು, ಆನಂದ್, ಧರಣಿ ಇತರರು ಉಪಸ್ಥಿತರಿದ್ದರು.

