ಅದ್ದೂರಿಯಾಗಿ ನಡೆದ ರೈಲ್ವೆ ಚೌಡೇಶ್ವರಿ ವಾರ್ಷಿಕ ಪೂಜೆ. ಸಕಲೇಶಪುರ : ಪಟ್ಟಣದ ರೈಲ್ವೆ ಚೌಡೇಶ್ವರಿ ಅಮ್ಮನವರ ವಾರ್ಷಿಕ ಪೂಜೆ ಕಾರ್ಯಕ್ರಮ ಇಂದು ಅದ್ದೂರಿಯಾಗಿ ಜರುಗಿತು.ನೂರಾರು ಭಕ್ತಾದಿಗಳು ಅಮ್ಮನವರ ಪೂಜಾ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಪೂಜಾ ಕಾರ್ಯಕ್ರಮಕ್ಕೆ ಬಂದ ಭಕ್ತಾಧಿಗಳಿಗೆ ಅನ್ನಸಂತರ್ಪಣೆಯನ್ನು ಏರ್ಪಡಿಸಲಾಗಿತ್ತು .**ಗಾಳಿ ಮಳೆಗೆ ಹಾರಿಹೋದ ಶಾಮಿಯಾನ* ಪೂಜಾ ಕಾರ್ಯಕ್ರಮಕ್ಕೆ ಬರುವ ಭಕ್ತಾದಿಗಳಿಗೆ ನೆರವಾಗಲೆಂದು ಹಾಕಲಾಗಿದ್ದ ಶಾಮಿಯಾನ ಗಾಳಿ ಮಳೆಗೆ ಹಾರಿದ ಪರಿಣಾಮ ರೈಲ್ವೆ ಕ್ವಾಟ್ರಸ್ಗೆ ಅಳವಡಿಸಲಾಗಿದ್ದ ಶೀಟ್ ಗಳು ಒಡೆದು ಹೋಗಿವೆ ಯಾವುದೇ ರೀತಿಯ ಪ್ರಾಣಪಾಯ ಸಂಭವಿಸಿಲ್ಲ ಎಂದು ಹೇಳಲಾಗಿದೆ. ಈ ಸಂದರ್ಭದಲ್ಲಿ ರೈಲ್ವೆ ಮಜ್ದೂರ್ ಯೂನಿಯನ್ ಸಂಘದ ಅಧ್ಯಕ್ಷ ಬಾಬಣ್ಣ, IOW ಆಫಿಸ್ ಕುಲ್ಚಂದ್, ಗೋವಿಂದರಾಜ್, ಲಕ್ಷ್ಮಣ್, ಉನ್ನಿಕೃಷ್ಣ, ಮಿತುನ್, ಅವಿನಾಶ್, ಸತೀಶ್, ನವೀನ್, ಪ್ರದೀಪ್, ಜಸ್ವಂತ್ ಹಾಗೂ ಅರ್ಚಕರಾದ ಶಂಕರಪ್ಪ ಇತರರು ಇದ್ದರು.

By tv46malenadu

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *