ಸಕಲೇಶಪುರ : ಶ್ರೀ ಗಣಪತಿ ಸೇವಾ ಸಮಿತಿ ಹಾಡ್ಯ ಸುಬ್ಬೇಗೌಡ ಪುರಭವನದಲ್ಲಿ ಇಂದು ಮುಕ್ತಾಯ ಸಮಾರಂಭವನ್ನು ನಡೆಸಲಾಯಿತು.

ಈ ಸಂದರ್ಭದಲ್ಲಿ ಕ್ಷೇತ್ರದ ಶಾಸಕ ಸಿಮೆಂಟ್ ಮಂಜು, ಮಾಜಿ ಶಾಸಕ ಹೆಚ್.ಎಂ.ವಿಶ್ವನಾಥ್, ಉಪವಿಭಾಗಾಧಿಕಾರಿ ಡಾ.ಎಂ.ಕೆ.ಶೃತಿ ,ತಹಸೀಲ್ದಾರ್ ಮೇಘನಾ, ಡಿವೈಎಸ್ಪಿ ಪ್ರಮೋದ್ ಕುಮಾರ್ ಜೈನ್,ಪುರಸಭೆ ಅದ್ಯಕ್ಷೆ ಜ್ಯೋತಿ ರಾಜಕುಮಾರ್, ವಿಕಾಸಪರ್ವ ಚಲನ ಚಿತ್ರದ ನಾಯಕ ರೋಹಿತ್ ನಾಗೇಶ್, ನಟಿ ಸ್ವಾತಿ , ಗಣಪತಿ ಸೇವಾ ಸಮಿತಿ ಅದ್ಯಕ್ಷ ರವಿಕುಮಾರ್, ಉಮೇಶ್, ಮಹೇಶ್ ಇತರರು ಇದ್ದರು.

ಈ ವೇಳೆ ವಿವಿದ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿರುವ 55 ಬಾರಿ ರಕ್ತದಾನ ಮಾಡಿರುವ ಆನಂದ್ ಲಿಯೋವಾಸ್, ಪೌರಕಾರ್ಮಿಕರಾದ ಮಂಜುನಾಥ್.ಎ.ಆರ್.ಗುರುಮೂರ್ತಿ,ಮಾಜಿ ಸೈನಿಕ ಸೋಮಶೇಖರ್, ಸಮಾಜ ಸೇವೆಯಿಂದ ಆನಂದ್ ಅಪ್ಪಯ್ಯ, ಅವರಿಗೆ ಸನ್ಮಾನಿಸಲಾಯಿತು.

ನಂತರ ವಾಸವಿ ಶಾಲೆಯ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆದವು.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *