
ಹಾಸನ : ದಿನಾಂಕ 29-12-2024 ರಂದು ಭಾನುವಾರ ಬೆಳಿಗ್ಗೆ ನಗರದ ದ್ಯಾನಧಾಮ ವೆನಿಸಿರುವ ಶ್ರೀ ಜವೇನಹಳ್ಳಿ ಮಠದಲ್ಲಿ ತ್ರಿಮೂರ್ತಿ ಗುರುಗಳ ಪುಣ್ಯರಾಧನೆ ಹಾಗೂ ಗುರುಗಳ ಗದ್ದುಗೆಗಳಿಗೆ ಪೂಜೆ ರುದ್ರಭಿಷೇಕ ಮಹಾಮಂಗಳಾರತಿ ಜರುಗಿತು,
ದಿವ್ಯ ಸಾನಿಧ್ಯವನ್ನು ಶ್ರೀ ಶ್ರೀ ಸಂಗಮೇಶ್ವರ ಸ್ವಾಮೀಜಿ ಜವೇನಹಳ್ಳಿ ಮಠ, ಶ್ರೀ ಶ್ರೀ ಸ್ವತಂತ್ರ ಬಸವಲಿಂಗ ಶಿವಯೋಗಿಗಳು, ಶ್ರೀ ಮಹಾಂತ ಶಿವಲಿಂಗ ಮಹಾಸ್ವಾಮಿಗಳು ಮನೆ ಹಳ್ಳಿ,ಮಠ, ಶ್ರೀ ಜಯದೇವ ಸ್ವಾಮೀಜಿ ಚಿಲುಮೆ ಮಠ ಅರಕಲಗೂಡು, ಇವರುಗಳು ಸಾನಿಧ್ಯ ವಹಿಸಿದ್ದರು,
ಈ ಪೂಜಾ ಕಾರ್ಯಕ್ರಮದಲ್ಲಿ ಶ್ರೀ ಜವೇನಹಳ್ಳಿ ಮಠದ ಹಿತರಕ್ಷಣಾ ಸಮೀತಿ ಅಧ್ಯಕ್ಷ ರಾದ ಬಿ. ವಿ ಉಮೇಶ್, ಕ್ಯೆಲಾಸ್ ಶಂಕರ್, ಹಾಸನ ತಾಲ್ಲೂಕು ಜಿಲ್ಲಾ ವೀರಶೈವ ಲಿಂಗಾಯತ ಸಂಘದ ಉಪಾಧ್ಯಕ್ಷ ರಾದ ಕೀರಣ್ ಕುಮಾರ್ ಹೊಸಮನಿ, ನಿರ್ದೇಶಕರಾದ ನಿಲಕಂಠಪ್ಪ , ವೀರಶೈವ ಲಿಂಗಾಯತ ಯುವ ಸೇನೆಯ ಕಾರ್ಯದರ್ಶಿ ಅವಿನಾಶ್ ಜಿ. ಎಸ್, ಹಾಸನ ಜಿಲ್ಲಾ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ನಿರ್ದೇಶಕರಾದ ಶರತ್ ಭೂಷಣ್, ಹಾಸನ ತಾಲ್ಲೂಕು ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ಪ್ರದಾನ ಕಾರ್ಯದರ್ಶಿ ಹೆಚ್. ವಿ. ಹೆಮಂತ್, ನಿರ್ದೇಶಕರಾದ ಮಯೂರಿ ಲೋಕೇಶ್, ವೀರಶೈವ ಲಿಂಗಾಯತ ಸಮಾಜದ ಮುಖಂಡರಾದ ಬೆಲ್ಲದ ನಟರಾಜ್, ಮಂಜುನಾಥ್. ಯು ಜೆ ಮಲ್ಲಿಕಾರ್ಜುನ್ , ಸತೀಶ್, ಮತ್ತು ರತ್ನಮ್ಮ, ಅನ್ನಪೂರ್ಣ, ನೀತು ಕೋಥಾರಿ, ಹಾಗೂ ನೂರಾರು ಭಕ್ತರು ಪಾಲ್ಗೊಂಡಿದ್ದರು, ಬಂದಂತಹ ಭಕ್ತರಿಗೆ ಪ್ರಸಾದ ವ್ಯವಸ್ಥೆಯನ್ನು ಮಾಡಲಾಗಿತ್ತು.
