
ಸಕಲೇಶಪುರ : ತಾಲ್ಲೂಕಿನ ಹೆತ್ತೂರು ಶ್ರೀನಿವಾಸ್ ರವರ ಕಾಫಿ ತೋಟದಲ್ಲಿ ಇಂದು 15 ಅಡ್ಡಿ ಉದ್ದ ಹಾಗೂ 14 ಕೆಜಿ ತೂಕದ ಕಾಳಿಂಗ ಸರ್ಪ ಕಾಣಿಸಿಕೊಂಡಿತ್ತು, ತಕ್ಷಣ ಸಕಲೇಶಪುರದ ಉರಗತಜ್ಞ ಮಹಮದ್ ಫರಾನ್ ರವರಿಗೆ ವಿಷಯ ತಿಳಿಸಲಾಯಿತು.
ತಕ್ಷಣ ಸ್ಥಳಕ್ಕೆ ಬಂದ ಮಹಮದ್ ಫರಾನ್ ಕಾಳಿಂಗ ಸರ್ಪವನ್ನು ಹಿಡಿದು, ಅರಣ್ಯಾಧಿಕಾರಿಗಳ ಸಮ್ಮುಖದಲ್ಲಿ ಸಕಲೇಶಪುರ ಪಶ್ಚಿಮ ಘಟ್ಟದ ಅಡ್ಡಹೊಳೆಯ ರಕ್ಷಿತಾ ಅರಣ್ಯಕ್ಕೆ ಬಿಡಲಾಯಿತು.
