
ಸಕಲೇಶಪುರ : ಪಟ್ಟಣದ ಒಕ್ಕಲಿಗರ ಕಲ್ಯಾಣ ಮಂಟಪದಲ್ಲಿ ಇಂದು ಬ್ಲಾಕ್ ಕಾಂಗ್ರೆಸ್ ಕಾರ್ಯಕರ್ತರ ಸಭೆಯು ಹಾಸನ ಲೋಕಸಭಾ ಕಾಂಗ್ರೆಸ್ ಅಭ್ಯರ್ಥಿ ಶ್ರೇಯಸ್ ಪಟೇಲ್ ಅಧ್ಯಕ್ಷತೆಯಲ್ಲಿ ನಡೆಯಿತು.
ಈ ಕಾರ್ಯಕರ್ತರ ಸಭೆಯಲ್ಲಿ ಅರಸೀಕೆರೆಯ ಶಾಸಕರಾದ ಶಿವಲಿಂಗೇಗೌಡ ಹಾಗೂ ಸಕಲೇಶಪುರದ ಪರಾಜೀತ ಅಭ್ಯರ್ಥಿ ಮುರುಳಿ ಮೋಹನ್, ಬೈರಮುಡಿ ಚಂದ್ರಣ್ಣ, ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಈ ಕಾರ್ಯಕ್ರಮದಲ್ಲಿ ಹಾಸನ ಜಿಲ್ಲಾ ಲೋಕಸಭಾ ಕಾಂಗ್ರೆಸ್ ಅಭ್ಯರ್ಥಿ ಶ್ರೇಯಸ್ ಪಟೇಲ್ ಗೆ ಅದ್ದೂರಿ ಸನ್ಮಾನ ಹಾಗೂ ಮಾಲಾರ್ಪಣೆ ಮಾಡಲಾಯಿತು.
ಈ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷದ ಮುಖಂಡರು ತಾಲೂಕು ಕಾಂಗ್ರೆಸ್ ಕೆ.ಪಿ. ಸಿ. ಸಿ ಸದಸ್ಯರುಗಳಾದ ಸಲೀಂ ಕೊಲ್ಲಹಳ್ಳಿ, ಯಡೆಹಳ್ಳಿ ಮಂಜುನಾಥ್,ಕಾಂಗ್ರೆಸ್ ಮುಖಂಡರುಗಳಾದ ಮುರಳಿ ಮೋಹನ್, ಬಾಚಿಹಳ್ಳಿ ಪ್ರತಾಪ್ ಗೌಡ, ದೇವರಾಜ್ ಬೈಕೆರೆ, ಪ್ರಶಾಂತ್ ಕಲ್ಗಣೆ, ಹಾನುಬಾಳು ಭಾಸ್ಕರ್,ಸಣ್ಣ ಸ್ವಾಮಿ, ಗೊದ್ದು ಲೋಕೇಶ್, ಪುರಸಭಾ ಸದಸ್ಯರುಗಳಾದ ಸೈಯದ್ ಮುಫೀಜ್, ಅಣ್ಣಪ್ಪ,ಅನ್ನಪೂರ್ಣ, ನರ್ತನ್ ಸೇರಿದಂತೆ ಇನ್ನಿತರರು ಇದ್ದರು

