
ಸಕಲೇಶಪುರ :- ತಾಲೂಕಿನ ಹೆತ್ತೂರು ಹೋಬಳಿಯ ಹಾಡ್ಯ ಸರ್ಕಾರಿ ಕಿರಿಯ ಪ್ರಾಥಮಿಕ ಪಾಠಶಾಲೆಯ 16ವಿದ್ಯಾರ್ಥಿಗಳಿಗೆ ಬೆಂಗಳೂರಿನ ತ್ರಿನೇತ್ರ ಫೌಂಡೇಶನ್ (ರಿ ) ವತಿಯಿಂದ ಕಲಿಕಾ ಸಾಮಗ್ರಿಗಳನ್ನು ವಿತರಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಅಂತರಾಷ್ಟ್ರೀಯ ವಾಸ್ತು ತಜ್ಞ ಜಯರಾಮ್” ಇತ್ತೀಚಿನ ದಿನಗಳಲ್ಲಿ ಸರ್ಕಾರಿ ಶಾಲೆಗಳು ಮುಚ್ಚುವ ಹಂತಕ್ಕೆ ಬಂದಿವೆ.
ಸರ್ಕಾರಿ ಶಾಲೆಯಲ್ಲಿ ಕಲಿಯುತ್ತಿರುವ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಇತರ ಕಲಿಕಾ ಸಾಮಗ್ರಿಗಳನ್ನು ವಿತರಿಸುವ ಮೂಲಕ ಪ್ರೋತ್ಸಾಹ ನೀಡಲಾಗುತ್ತಿದೆ.ಎಂದರು
ಈ ಸಂದರ್ಭದಲ್ಲಿ ರಾಜೇಶ್ವರಿ ಸಂಶೋಧನಾ ಸಂಸ್ಥೆಯ ಅಧ್ಯಕ್ಷರಾದ ನಿರಂಜನ್ ಬಾಬು ಗುರೂಜಿ, ಡಾಕ್ಟರ್ ಜಯರಾಮ್ ಬೆಂಗಳೂರು,ಸೋಮಶೇಖರ್ ಬೆಂಗಳೂರು, ಶಾಲ ಮುಖ್ಯೋಪಾಧ್ಯಾಯರಾದ ಜಿ.ಆರ್ ಸತೀಶ್, ಸಹ ಶಿಕ್ಷಕಿ ವಿ.ಕೆ ಜೋತಿಮಣಿ, ಹರೀಶ್ ಹಳ್ಳಿ ಗದ್ದೆ,ಅಡಿಗೆ ಸಿಬ್ಬಂದಿಯರಾದ ಸುಬ್ಬಲಕ್ಷ್ಮಿ, ಇದ್ದರು.




