
“ರೋಗ ಮುಕ್ತ ಬೆಳೆಗೆ ಬೀಜೋಪಚಾರ”
ಸಣ್ಣಚಾಕನಹಳ್ಳಿ ಹಾಗೂ ದೊಡ್ಡ ಚಾಕನಹಳ್ಳಿಯಲ್ಲಿ ಕೃಷಿ ಮಹಾವಿದ್ಯಾಲಯ ಕಾರೆಕೆರೆ ಹಾಸನದ ಅಂತಿಮ ವರ್ಷದ ಕೃಷಿ ವಿದ್ಯಾರ್ಥಿಗಳಿಂದ “ರೋಗ ಮುಕ್ತ ಬೆಳೆಗೆ ಬೀಜೋಪಚಾರದ” ಕಾರ್ಯಕ್ರಮ ಅಡಿಯಲ್ಲಿ ದಿನಾಂಕ 23/7/2025 ರಂದು ಬೀಜೋಪಚಾರದಿಂದ ಜೋಳದಲ್ಲಿ ಬಿಳಿ ಸುಳಿ ರೋಗ ತಡೆಗಟ್ಟುವ ಬಗ್ಗೆ ರೈತರಿಗೆ ಸಂಪೂರ್ಣ ಮಾಹಿತಿಯನ್ನು ನೀಡಲಾಯಿತು
ಈ ಕಾರ್ಯಕ್ರಮವನ್ನು ವಿದ್ಯಾರ್ಥಿನಿಯಾದ ಕವನ .ಎನ್ ರವರು ನಡೆಸಿಕೊಟ್ಟರು.
ಪ್ರಸ್ತುತ ಈ ಕಾರ್ಯಕ್ರಮಕ್ಕೆ ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ್ದ ಡಾ|| ಕಿರಣ್ ಸಾಗರ್ .ಡಿ.ಸಿ ಸಹಾಯಕ ಪ್ರಾಧ್ಯಾಪಕ ತೋಟಗಾರಿಕಾ ವಿಭಾಗ ಕೃಷಿ ಮಹಾವಿದ್ಯಾಲಯ ಕಾರೆಕೆರೆ ಹಾಸನ ರವರು ಮಾತನಾಡಿ ಬೀಜೋಪಚಾರದ ಮಹತ್ವದಿಂದ ಅದರ ಉಪಯೋಗವನ್ನು ರೈತರಿಗೆ ತಿಳಿಸಿದರು ಕುಮಾರಸ್ವಾಮಿ ಅವರ ಕೈಯಿಂದ ಬೀಜೋಪಚಾರದ ಪ್ರಾತ್ಯಕ್ಷಿಕೆಯನ್ನು ಮಾಡಿಸಲಾಯಿತು.
ರೈತರೊಡನೆ ಉತ್ತಮ ಸಂವಾದದೊಂದಿಗೆ ಕಾರ್ಯಕ್ರಮನು ಯಶಸ್ವಿಯಾಗಿ ನಡೆಸಲಾಯಿತು.
