
ಸಕಲೇಶಪುರ : ಆನೆಮಹಲ್ ಗ್ರಾಮ ಪಂಚಾಯಿತಿ 5% ವಿಕಲ ಚೇತನ ಅನುದಾನದಲ್ಲಿ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಹಾಲಿ ಸದಸ್ಯರಾದ ಹಸೈನಾರ್ ಆನೆಮಹಲ್ ಅಶ್ರಫ್ ಸುಹರಾಸಲೀಂ ಮತ್ತು ಮಂಜುಳಾ ರವರ ಅನುದಾನದಲ್ಲಿ ಆನೆಮಹಲ್ ಅಡ್ಡನಗುಡ್ಡೆ ದೇವಿಹಳ್ಳಿ ಗ್ರಾಮದ ವಿವಿಧ ವಿಕಲಚೇತನ ಫಲಾನುಭವಿಗಳಿಗೆ ಉಪಯೋಗವಾಗುವ ನೀರು ತುಂಬುವ ಟ್ಯಾಂಕ್ ನೀರೆತ್ತುವ ಮೋಟಾರ್ ಕಿವಿ ಮಿಷನ್ ಊರುಗೋಲು ಸೋಲಾರ್ ಲೈಟ್ ಮತ್ತು ಸ್ಟಿಕ್ ಗಳನ್ನು ವಿತರಿಸಲಾಯಿತು
ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸುಮಾ ದೇವರಾಜು ಉಪಾಧ್ಯಕ್ಷ ವಿರೂಪಾಕ್ಷ ಅಭಿವೃದ್ಧಿ ಅಧಿಕಾರಿ ವೇಣುಗೋಪಾಲ್ ಸದಸ್ಯರಾದ ತಿಮ್ಮಯ್ಯ ವೀರಭದ್ರ ಚಂದ್ರಾವತಿ ಚೆನ್ನಮ್ಮ ಮತ್ತು ಕಾರ್ಯದರ್ಶಿ ವೀರೇಶ್ ಭಾಗವಹಿಸಿದ್ದರು
