
ಸಕಲೇಶಪುರ :ವಿಶ್ವ ಹಿಂದೂ ಪರಿಷತ್ ಬಜರಂಗದಳ ಇವರ ವತಿಯಿಂದ ಇಂದು ರಾಘವೇಂದ್ರ ನಗರ (ಬಾಳೆಗದ್ದೆ) ಘಟಕಕ್ಕೆ ಚಾಲನೆ ನೀಡಲಾಯಿತು.
ಆರ್ ಎಸ್ ಎಸ್ ಸ್ವಯಂಸೇವಕರಾದ ಗಿರಿಯಪ್ಪನವರು ಧ್ವಜ ಸ್ತಂಭವನ್ನು ಉದ್ಘಾಟಿಸಿ ಹನುಮಂತ ಧ್ವಜವನ್ನು ಹಾರಿ ಸುವುದರ ಮುಖಾಂತರ ಉದ್ಘಾಟನೆ ಮಾಡಲಾಯಿತು.
ಈ ಕಾರ್ಯಕ್ರಮದಲ್ಲಿ ಜಿಲ್ಲಾ ಉಪಾಧ್ಯಕ್ಷರಾದ ವಿಜಿ ಕುಮಾರ್, ಜಿಲ್ಲಾ ಸುರಕ್ಷಾ ಪ್ರಮುಖ್ ರಘುಪ್ರಸಾದ್, ತಾಲೂಕು ಅಧ್ಯಕ್ಷ ಬಾಲಕೃಷ್ಣ, ಕಾರ್ಯದರ್ಶಿ ಲೋಹಿತ್,ರವಿ, ತಾಲೂಕು ಸಂಯೋಜಕರಾದ ವಿಷ್ಣುರಾವ್ (ಬಾಳೇಗದ್ದೆ), ನಗರ ಅಧ್ಯಕ್ಷ ಮಹೇಂದ್ರ,ನಗರ ಸಂಯೋಜಕ ಸುಜನ್, ಬಿಜೆಪಿ ನಗರ ಅಧ್ಯಕ್ಷ ಲೋಕೇಶ್, ನಂದನ್, ಜಯರಾಮ್, ಲೋಕೇಶ್, ಪುರಸಭಾ ಮಾಜಿ ಸದಸ್ಯರಾದ ಮೋಹನ್ ಹಾಗೂ ಗುಹೆ ಕಲ್ಲಮ್ಮ ದೇವಸ್ಥಾನದ ಆಡಳಿತ ಮಂಡಳಿಯವರು ಇದ್ದರು.







