
ಸಕಲೇಶಪುರ: ಕೋಗಿಲೆಯೊಂದು ಕಾಗೆಯ ದಾಳಿಯಿಂದ ತಪ್ಪಿಸಿಕೊಳುವ ಪ್ರಯತ್ನದಲ್ಲಿದ್ದಾಗ ಅಲ್ಲೇ ಪಕ್ಕದಲ್ಲಿದ್ದ ಅಂಬೇಡ್ಕರ್ ಭವನದ ಕಿಟಕಿಯ ಗಾಜಿಗೆ ರಬಸದಿಂದ ಬಂದು ಹೊಡೆದ ಪರಿಣಾಮ ತಲೆಗೆ ಸ್ವಲ್ಪ ಪೆಟ್ಟಾಗಿ ಕೆಳಗೆ ಬಿದ್ದಿದೆ ಅದನ್ನು ಗಮನಿಸಿದ ವಾಚ್ ಮೆನ್ ಅದಕ್ಕೆ ನೀರು ಕುಡಿಸಿಆರೈಕೆ ಮಾಡಿದ್ದಾರೆ ನಂತರ ಪತ್ರಕರ್ತರಾದ ಜಾನೆಕೆರೆ ಪರಮೇಶ ಕೋಗಿಲೆಯನ್ನು ಪಶು ಆಸ್ಪತ್ರೆಗೆ ಕರೆದೊಯ್ದು ಪಶು ವೈದ್ಯರಾದ ಡಾ. ನವೀನ್ ಕೋಗಿಲೆಗೆ ಚಿಕಿತ್ಸೆ ನೀಡಿದ್ದಾರೆ ಕೋಗಿಲೆ ಸ್ವಲ್ಪ ಚೇತರಿಸಿಕೊಂಡಿದ್ದು ಇನ್ನು ಎರಡು ದಿನಗಳಲ್ಲಿ ಮತ್ತೆ ಮೊದಲಿನಂತೆ ಹಾರಬಲ್ಲದು ಎಂದು ಭರವಸೆ ನೀಡಿದ್ದಾರೆ.





