
ನೈರುತ್ಯ ಮುಂಗಾರು ಚುರುಕು ಹಿನ್ನೆಲೆ ಬೆಂಗಳೂರು ಸೇರಿದಂತೆ ರಾಜ್ಯದಲ್ಲಿ ಮುಂದಿನ 9 ದಿನಗಳ ಕಾಲ ಮಳೆಯಾಗಲಿದೆ. ಅದರಲ್ಲೂ ಮುಂದಿನ ಐದು ದಿನಗಳ ಕಾಲ ಭಾರೀ ಮಳೆಯಾಗಲಿದೆ. ಉಳಿದ ದಿನಗಳಲ್ಲಿ ಸಾಧಾರಣ ಮಳೆಯಾಗಲಿದೆ. ಕಳೆದ ಜೂನ್ 21ರ ವರೆಗೆ ನೋಡಿದರೆ 70% ಮಳೆಯ ಕೊರತೆ ಇತ್ತು. ಆದರೀಗ ಹೆಚ್ಚಿನ ಮಳೆಯಾಗುತ್ತಿದೆ. ರಾಜ್ಯದಲ್ಲಿ ನಿರೀಕ್ಷಿತವಾಗಿ 40.5% ಮಳೆ ಆಗಬೇಕಿತ್ತು. ಆದ್ರೆ ಅದಕ್ಕಿಂತಲೂ 4.08%, 0.5 % ಹೆಚ್ಚಾಗಿ ಆಗಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ನಗರಗಳ ಹವಾಮಾನ ವರದಿ:
ಬೆಂಗಳೂರು: 22-19
ಮಂಗಳೂರು: 26-24
ಶಿವಮೊಗ್ಗ: 23-21
ಬೆಳಗಾವಿ: 22-20
ಮೈಸೂರು: 24-20
ಮಂಡ್ಯ: 24-20
ಮಡಿಕೇರಿ: 18-17
ರಾಮನಗರ: 24-21
ಹಾಸನ: 22-19
ಚಾಮರಾಜನಗರ: 26-21
ಚಿಕ್ಕಬಳ್ಳಾಪುರ: 22-19
ಕೋಲಾರ: 23-21
ತುಮಕೂರು: 23-20
ಉಡುಪಿ: 26-24
ಕಾರವಾರ: 26-25
ಚಿಕ್ಕಮಗಳೂರು: 21-18
ದಾವಣಗೆರೆ: 23-21
ಹುಬ್ಬಳ್ಳಿ: 23-21
ಚಿತ್ರದುರ್ಗ: 23-20
ಹಾವೇರಿ: 23-21
ಬಳ್ಳಾರಿ: 24-22
ಗದಗ: 23-21
ಕೊಪ್ಪಳ: 24-22
ರಾಯಚೂರು: 26-22
ಯಾದಗಿರಿ: 26-23
ವಿಜಯಪುರ: 25-22
ಬೀದರ್: 25-22
ಕಲಬುರಗಿ: 26-22
ಬಾಗಲಕೋಟೆ: 25-22

