
ಮುಸ್ಲಿಂ ಮುಖಂಡರಾದ ಫೈಜು ಅವರ ಮನೆಗೆ ಬೇಟಿ ನೀಡಿ ಚುನಾವಣೆಗೆ ಸಹಕಾರ ನೀಡುವಂತೆ ಜೆಡಿಎಸ್ ಶಾಸಕ ಹೆಚ್.ಕೆ.ಕುಮಾರಸ್ವಾಮಿ ವಿನಂತಿ ಮಾಡಿಕೊಂಡರು.ಪಟ್ಟಣದ ಕುಶಾಲನಗರ ಬಡಾವಣೆಯಲ್ಲಿರುವ ಮುಸ್ಲಿಂ ಮುಖಂಡರು ,ಕಾಫಿ ಮತ್ತು ಮೆಣಸು ವ್ಯಾಪಾರಿಗಳಾದ ಜಾಮೀಯ ಮಸೀದಿಯ ಮಾಜಿ ಕಾರ್ಯದರ್ಶಿಗಳಾದ ಫೈಜು ಅವರ ಮನೆಗೆ ಮಂಗಳವಾರ ಬೇಟಿ ನೀಡಿದ ಶಾಸಕರು ಹಾಗೂ ಪಕ್ಷದ ಮುಖಂಡರು ಸಕಲೇಶಪುರ ವಿಧಾನಸಭಾ ಕ್ಷೇತ್ರದ ಚುನಾವಣೆಯಲ್ಲಿ ಸಹಕಾರ ನೀಡುವಂತೆ ಮನವಿ ಮಾಡಿಕೊಂಡರು.ಈ ಸಂದರ್ಭದಲ್ಲಿ ಪಕ್ಷದ ಅಧ್ಯಕ್ಷ ಕೆ.ಎಲ್.ಸೋಮಶೇಖರ್, ಎಂ.ಹೆಚ್.ಪ್ರಕಾಶ್, ಮುಸ್ಲಿಂ ಮುಖಂಡರು ಪುರಸಭೆ ಸಧಸ್ಯರಾದ ಯಾದ್ ಗಾರ್ ಇಬ್ರಾಹಿಂ, ಸಮೀರ್, ಇಸ್ರಾರ್ ,ಇತರರು ಇದ್ದರು.
ವರದಿ : ವ್ಯವಸ್ಥಾಪಕರು ರಾಕೇಶ್, ಶೇಷಾದ್ರಿ ಪ್ರಧಾನ ಸಂಪಾದಕರು ಎಸ್ ಎಮ್ ಮಂಜುನಾಥ್, ಸಂಪಾದಕರು ಉಮೇಶ್ ಎಂ. ಬಿ, ಸಂಕಲನಕಾರರು ಮೋಹನ್ Fcc
