
ಸಕಲೇಶಪುರ : ಹಾನುಬಾಳು ಹೋಬಳಿ ಬೆಳೆಗಾರರ ಸಂಘವು ಬೆಳೆಗಾರರ ನೆರವಿನಿಂದ ನಿರ್ಮಿಸಿರುವ ಸಂಘದ ನೂತನ ಕಟ್ಟಡದ ಉದ್ಘಾಟನಾ ಸಮಾರಂಭದ ಆಹ್ವಾನ ಪತ್ರಿಕೆಯನ್ನು ಸಂಬಂಧಪಟ್ಟ ನಿರ್ದೇಶಕರ ಮುಖಾಂತರ ತಲುಪಿಸಿದ್ದೇವೆ.
ಆ ಭಾಗದ ನಿರ್ದೇಶಕರುಗಳು ಎಲ್ಲಾ ಬೆಳೆಗಾರರಿಗೆ ಆಹ್ವಾನ ಪತ್ರಿಕೆಯನ್ನು ತಲುಪಿಸಿರುತ್ತಾರೆ ಅನಿವಾರ್ಯ ಕಾರಣಗಳಿಂದ ಆಹ್ವಾನ ಪತ್ರಿಕೆಗಳು ತಲುಪದೇ ಇದ್ದಲ್ಲಿ ಇದನ್ನು ಮನ್ನಿಸಿ ಇದನ್ನೇ ಕರೆಯೋಲೆಂದು ತಿಳಿದು ದಿನಾಂಕ 21. 09 .2023ನೆ ಗುರುವಾರ ಬೆಳಿಗ್ಗೆ 11 ಗಂಟೆಗೆ ನಡೆಯುವ ಉದ್ಘಾಟನಾ ಸಮಾರಂಭಕ್ಕೆ ತಾವುಗಳು ಕುಟುಂಬ ಸಮೇತ ಆಗಮಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಈ ಮೂಲಕ ಕೇಳಿಕೊಳ್ಳುತ್ತೇವೆ.
ನಿಮ್ಮೆಲ್ಲರ ನಿರೀಕ್ಷೆಯಲ್ಲಿ ಹಾನುಬಾಳು ಹೋಬಳಿ ಬೆಳೆಗಾರರ ಸಂಘ ಸಕಲೇಶಪುರ.

