
ಬೇಲೂರು :ಅರೇಹಳ್ಳಿ ಹೋಬಳಿಯ ನಾರ್ವೆ ಪೇಟೆ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಜಲ ಜೀವನ್ ಮಿಷನ್ ಯೋಜನೆಯ ಗುದ್ದಲಿ ಪೂಜೆ ಮಾಡಿ ಈ ಸಂದರ್ಭದಲ್ಲಿ ಮಾತನಾಡಿದ ಬೇಲೂರು ಶಾಸಕರು ಎಚ್. ಕೆ. ಸುರೇಶ್ ಜಲ ಜೀವನ್ ಮಿಷನ್ ಯೋಜನೆ ಕೇಂದ್ರ ಸರ್ಕಾರ ಮಹಿಳೆಯರ ಹಿತರಕ್ಷಣಾ ದೃಷ್ಟಿಯಿಂದ ಪ್ರದಾನ ಮಂತ್ರಿ ನರೇಂದ್ರ ಮೋದಿ ಯವರು ಮನೆ ಮನೆಗೆ ಗಂಗೆ ಯೋಜನೆ ಸಾರ್ವಜನಿಕರು ನೀರಿನ ಮಹತ್ವ ತಿಳಿಸಲು ನೀರು ವ್ಯಯ ಆಗದಿರಲು ಇದನ್ನು ಈ ಯೋಜನೆಯಾಗಿದೆ, ಗುತ್ತಿಗೆ ದಾರರು ಒಳ್ಳೆಯ ಗುಣಮಟ್ಟದ ಕಾಮಗಾರಿ ಮಾಡಬೇಕು ಎಂದು ಸಲಹೆ ನೀಡಿದರು,ಸದುಪಯೋಗ ಪಡೆದುಕೊಳ್ಳಿ ಎಂದರು.
ಈ ಸಂದರ್ಭದಲ್ಲಿ ಗ್ರಾಮಪಂಚಾಯಿತಿ ಅಧ್ಯಕ್ಷೆ ಮಾಲಾಶ್ರೀ ಸೋಮಯ್ಯ, ಉಪಾಧ್ಯಕ್ಷ ಮಲ್ಲಿಕಾರ್ಜುನ ಎಸ್. ಎಚ್, ಎ ಇ ಇ. ರಂಜಿತಾ , ತಾ, ಪಂ ಎ. ಡಿ. ಗುರು ಪ್ರಸಾದ್, ಸದಸ್ಯರಾದ ಮಲ್ಲಿಕಾರ್ಜುನ ನಾರ್ವೆ, ಚಿದಾನಂದ್ , ಬೇಬಿಪ್ರಕಾಶ್, ಪವಿತ್ರ, ವೀಣಾ , ಮಂಜುನಾಥ್, ತಾ. ಪಂ. ಸದಸ್ಯ ಸೋಮಯ್ಯ, ಕೃಷ್ಣೆ ಗೌಡ , ಪಿ. ಡಿ. ಓ, ಚಂದ್ರಯ್ಯ ಕಾರ್ಯದರ್ಶಿ ಚಾಮರಾಜ್, ಗುತ್ತಿಗೆದಾರ ಉತ್ತಮ್, ಉದಯ್ ಕುಮಾರ್ ಹಾಗೂ ಗ್ರಾಮಸ್ಥರು ಹಾಜರಿದ್ದರು.



