
ಆಲೂರು : -ತಾಲ್ಲೂಕು ದಂಡಾಧಿಕಾರಿಯಾಗಿ ಬಂದಿರುವ ಸಿ ಪಿ ನಂದನ್ ಕುಮಾರ್ ರವರಿಗೆ ಕರ್ನಾಟಕ ರಕ್ಷಣಾ ವೇದಿಕೆಯ ಜಿಲ್ಲಾ ಕಾರ್ಯದರ್ಶಿ ಹಾಗೂ ಆಲೂರು ಸಕಲೇಶಪುರ ತಾಲ್ಲೂಕಿನ ಕರವೇ ಉಸ್ತುವಾರಿ ರಘು ಪಾಳ್ಯ , ತಾಲ್ಲೂಕು ಉಪಾಧ್ಯಕ್ಷರಾದ ಶಶಿಧರ , ಆಲೂರು ತಾಲ್ಲೂಕಿನ ಕರವೇ ನಗರ ಘಟಕದ ಅಧ್ಯಕ್ಷರಾದ ಅನಂದ್ ಟಿ. ಆರ್. ಹಾಗೂ ಕರವೇ ಕಾರ್ಯಕರ್ತರಾದ ಬರತರವಳ್ಳಿ ಮಂಜುರವರು ಸೇರಿ ತಾಲ್ಲೂಕು ದಂಡಾಧಿಕಾರಿಯಯವರಿಗೆ ಶುಭಾಶಯ ಕೋರಿದರು.
ತಾಲೂಕಿನಲ್ಲಿರುವ ರೈತರು ಸಮಸ್ಯೆಯಿಂದ ತಾಲ್ಲೂಕು ಕಛೇರಿಗೆ ಬಂದರೆ ಶೀಘ್ರದಲ್ಲೇ ಅವರ ಕೆಲಸಗಳನ್ನು ಮಾಡಿಕೊಡಬೇಕು ಎಂದು ಮನವಿ ಮಾಡಿಕೊಳ್ಳಲಾಯಿತು.

