
ಸಕಲೇಶಪುರ : ಬೇಲೂರು ತಾಲ್ಲೂಕಿನ ಅಂಕಿಹಳ್ಳಿಯ ಗಜೇಂದ್ರಪುರದಲ್ಲಿ ಕಾರ್ಮಿಕನ ಮೇಲೆ ಕಾಡಾನೆ ದಾಳಿ ನಡೆಸಿದ ಪರಿಣಾಮಪಶ್ಚಿಮ ಬಂಗಾಳ ಮೂಲದ ದೀಪಕ ರಾಯ್ ಗಾಯಗೊಂಡಿರುವ ಕಾರ್ಮಿಕನಾಗಿದ್ದು, ಅವರಿಗೆ ಸಕಲೇಶಪುರ ಕ್ರಾಪರ್ಡ್ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ತರಲಾಗಿತ್ತು..
ಅದರೆ ಅರಣ್ಯಾಧಿಕಾರಿಗಳು ಅರೇಹಳ್ಳಿಯಿಂದ ಬಂದ ಅಂಬುಲೆನ್ಸ್ ನಲ್ಲಿ ಹೆಚ್ಚಿನ ಚಿಕಿತ್ಸೆಗಾಗಿ ಹಾಸನಕ್ಕೆ ಕಳುಹಿಸದೇ ಸರ್ಕಾರಿ ಅ್ಯಂಬುಲೆನ್ಸ್ ಗೆ 108 ಕ್ಕೆ ಅರ್ಧ ಗಂಟೆಗಳಷ್ಟು ಕಾಯ್ದು ಕಳುಹಿಸಿದ್ದಕ್ಕೆ ಕಾಡಾನೆಯಿಂದ ದಾಳಿಗೆ ಒಳಗಾಗಿದ್ದ ವ್ಯಕ್ತಿಯ ಸಾವಾಗಿದೆ ಎಂದು ಕರ್ನಾಟಕ ರಕ್ಷಣಾ ವೇದಿಕೆ ಪ್ರವೀಣ್ ಶೆಟ್ಟಿ ಬಣದ ಸಕಲೇಶಪುರ ತಾಲ್ಲೂಕು ಅಧ್ಯಕ್ಷ ರಮೇಶ್ ಪೂಜಾರಿ ಆರೋಪಿಸಿದ್ದಾರೆ.

