
ಸಕಲೇಶಪುರ : ಸೋಮವಾರ ಕಾಡಾನೆ ಹಿಡಿಯುವ ಸಂದರ್ಭದಲ್ಲಿ ವಿಶ್ವವಿಖ್ಯಾತ ಮೈಸೂರು ದಸರಾ ನಡೆಯುವ ವೇಳೆ ಸುಮಾರು 8 ಬಾರಿ ಅಂಬಾರಿಯನ್ನು ಹೊತ್ತಂತಹ ಅರ್ಜುನ ಆನೆ ಮರಣಹೊಂದಿರುವುದಕ್ಕೆ ಸರಕಾರದ ವೈಫಲ್ಯ ಹಾಗೂ ಅರಣ್ಯ ಇಲಾಖೆಯ ಪೂರ್ವಯೋಜಿತ ಬೇಜವಾಬ್ದಾರಿಯಿಂದ ಅರ್ಜುನ ಮೃತಪಟ್ಟಿದೆ ಇದನ್ನು ನ್ಯಾಯಾಂಗ ತನಿಖೆಗೆ ಒಪ್ಪಿಸಬೇಕು ಎಂದು ಶಶಿಕುಮಾರ್ ಆಗ್ರಹಿಸಿದ್ದಾರೆ.
