*ಜೇನುಕೃಷಿ – ಗ್ರಾಮೀಣ ರೈತರಿಗೆ ಸಹಉದ್ಯೋಗ ತರಬೇತಿ ಶಿಬಿರ*

ಹಾಸನದ ಕಾರೇಕೆರೆಯ ಕೃಷಿ ಮಹಾವಿದ್ಯಾಲಯದ ಅಂತಿಮ ವರ್ಷದ ಬಿ. ಎಸ್. ಸಿ (ಆನರ್ಸ್)ಕೃಷಿ ವಿದ್ಯಾರ್ಥಿಗಳು ಗ್ರಾಮೀಣ ಕೃಷಿ ಕಾರ್ಯಾನುಭವ ಶಿಬಿರ 2023-24 ರ ಅಂಗವಾಗಿ ಅರಸೀಕೆರೆ ತಾಲ್ಲೂಕು ಗಂಡಸಿ ಹೋಬಳಿಯ ಕುಡುಕುಂದಿ ಗ್ರಾಮದಲ್ಲಿ *ಜೇನುಕೃಷಿ ಗ್ರಾಮೀಣ ರೈತರಿಗೆ ಸಹಉದ್ಯೋಗ ತರಬೇತಿ ಶಿಬಿರ* ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದರು.

ಜೇನುಕೃಷಿ ಪ್ರಮುಖ ಗ್ರಾಮೀಣ ಸಹಉದ್ಯೋಗವಾಗಿದ್ದು ರೈತರಿಗೆ ಹೆಚ್ಚಿನ ಆದಾಯ ತರುವಲ್ಲಿ ಯಶಸ್ವಿಯಾಗಿದೆ. ಹೀಗಾಗಿ ಈ ಕುರಿತು ತರಬೇತಿ ನೀಡಲು ಚರಣಸಿಂಗ್ ಚೌಧಾರಿ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಅಗ್ರಿಕಲ್ಚರಲ್ ಮಾರ್ಕೆಟಿಂಗ್ ರವರ ಸಹಭಾಗಿತ್ವದಲ್ಲಿ ಮೂರು ದಿನಗಳ ಕಾಲ ತರಬೇತಿ ಶಿಬಿರವನ್ನು ಹಮ್ಮಿಕೊಳ್ಳಲಾಗಿತ್ತು.

ಈ ಕಾರ್ಯಕ್ರಮದಲ್ಲಿ ಕುಡುಕುಂದಿ, ಚಗಚಗೆರೆ,ಮಂಜೇನಹಳ್ಳಿ ಗ್ರಾಮಗಳ 30 ಆಸಕ್ತ ರೈತರು ಭಾಗವಹಿಸಿದರು.

ಕಾರ್ಯಕ್ರಮವು ಮೊದಲನೆಯ ದಿನ ಡಾ|| ಎಸ್.ಎನ್ ವಾಸುದೇವನ್ ಡೀನ್( ಕೃಷಿ) ಅವರ ಅಧ್ಯಕ್ಷತೆಯಲ್ಲಿ ಉದ್ಘಾಟನೆಗೊಂಡಿತು.

ಈ ಕಾರ್ಯಕ್ರಮದಲ್ಲಿ ಡಾ|| ಶಶಿಕಿರಣ ಎ. ಎಸ್, ಡಾ|| ಅರವಿಂದಕುಮಾರ ಎಮ್. ಕೆ, ಡಾ|| ಬಿ. ಎಸ್ ಬಸವರಾಜು,ಡಾ|| ಕೆ. ಎನ್ ಮುನಿಸ್ವಾಮಿಗೌಡ, ಡಾ|| ಸುನೀತಾ ಟಿ .ಆರ್,ಡಾ|| ರಾಘವೇಂದ್ರ ಶಿವಲಿಂಗಯ್ಯ, ಡಾ|| ಹರ್ಷಿತ ಎ. ಪಿ ಸಹ ಪ್ರಾಧ್ಯಾಪಕರು ಕೃಷಿ ಕಾಲೇಜು ಹಾಸನ ಹಾಗೂ ಡಾ|| ವಿಜಯಕುಮಾರ್ ಎ . ಟಿ ವಿಜ್ಞಾನಿಗಳು ಹಾಗೂ ಮುಖ್ಯಸ್ಥರು AICRP, honeybees and pollinators ಮತ್ತು ಸಂತೋಷ್ ಕ್ಷೇತ್ರ ಸಹಾಯಕರು ಪಾಲ್ಗೊಂಡಿದ್ದರು.

ಭಾಗವಹಿಸಿದ ರೈತರಿಗೆ ಜೇನುಕೃಷಿಯ ತರಬೇತಿ ನೀಡಿ ಜೇನುಪೆಟ್ಟಿಗೆಗಳನ್ನು ಉಚಿತವಾಗಿ ನೀಡಲಾಯಿತು ಮತ್ತು ಎಲ್ಲರಿಗೂ ಪ್ರಮಾಣ ಪತ್ರವನ್ನು ವಿತರಿಸಲಾಯಿತು.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *