ಚನ್ನರಾಯಪಟ್ಟಣ: ಪರಮ ಪೂಜ್ಯ ಶ್ರೀ ಶ್ರೀ ಶ್ರೀ ಲಿಂಗೈಕ್ಯ ಬಾಲಗಂಗಾಧರನಾಥ ಸ್ವಾಮೀಜಿಗಳ 79ನೇ ಜನ್ಮದಿನದ ಅಂಗವಾಗಿ ಪಟ್ಟಣದ ಸರ್ಕಾರಿ ಆಸ್ಪತ್ರೆಯ ರೋಗಿಗಳಿಗೆ ಬಿಜಿಎಸ್ ಸಹಕಾರ ಸಂಘದ ವತಿಯಿಂದ ಹಣ್ಣು ಮತ್ತು ಹಂಪಲಗಳನ್ನು ವಿತರಿಸಲಾಯಿತು.

ಈ ಕಾರ್ಯಕ್ರಮದಲ್ಲಿ ಬಿಜಿಎಸ್ ಸೌವ್ವಾದ್ರ ಸಹಕಾರ ಸಂಘದ ಸಂಸ್ಥಾಪಕ ನಿರ್ದೇಶಕರಾದ ದಾಸರಹಳ್ಳಿರಂಗೇಗೌಡ ಮಾತನಾಡಿ ಪರಮಪೂಜ್ಯ ನಿರ್ಮಲನಾಥ ಸ್ವಾಮೀಜಿಗಳು ಹಾಗೂ ಶ್ರೀ ಶ್ರೀ ಶಂಭುನಾಥ ಸ್ವಾಮೀಜಿಯವರ ಮಾರ್ಗದರ್ಶನದಲ್ಲಿ ಈ ದಿನ ನಾವು ಚನ್ನರಾಯಪಟ್ಟಣದ ಸರ್ಕಾರಿ ಆಸ್ಪತ್ರೆಯ 100 ಜನ ರೋಗಿಗಳಿಗೆ ಹಣ್ಣು ಹಂಪಲುಗಳನ್ನು ವಿತರಣೆ ಮಾಡಲಾಗಿದೆ ಎಂದರು.

ಪರಮಪೂಜ್ಯ ಬಾಲಗಂಗಾಧರನಾಥ ಸ್ವಾಮೀಜಿಗಳ ತತ್ವ ಆದರ್ಶಗಳನ್ನು ಪ್ರತಿಯೊಬ್ಬರು ಮೈಗೂಡಿಸಿಕೊಂಡು ಈ ಸಮಾಜದಲ್ಲಿ ಸಹೋದರತೆಯಿಂದ ಬಾಳಬೇಕಾಗಿದೆ ಎಂದು ನುಡಿದರು.

ಇದೇ ಸಂದರ್ಭದಲ್ಲಿ ಚನ್ನರಾಯಪಟ್ಟಣ ತಾಲೂಕು ಬಿಜಿಎಸ್ ಸಹಕಾರ ಸಂಘದ ಅಧ್ಯಕ್ಷರಾದ ಮಧುಸೂಧನ್, ಉಪಾಧ್ಯಕ್ಷರು ಸುರೇಶ್, ಸಂಸ್ಥಾಪಕ ನಿರ್ದೇಶಕರಾದ ದಾಸರಹಳ್ಳಿರಂಗೇಗೌಡ, ಕೆಜೆ ಸುರೇಶ್ , ಮಂಜೇಗೌಡ,ಸಾರ್ವಜನಿಕ ಆಸ್ಪತ್ರೆ ವೈದ್ಯಧಿಕಾರದ ಡಾಕ್ಟರ್ ಮಹೇಶ್, ಬಿಜಿಎಸ್ ಶಿಕ್ಷಣ ಸಮೂಹಗಳ ಸಂಸ್ಥೆಗಳ ಮುಖ್ಯಸ್ಥರುಗಳಾದ ಎಂ ಕೆ ಮಂಜುನಾಥ್, ಕುಮಾರ್, ಬಿಜಿಎಸ್ ಸಹಕಾರ ಸಂಘದ ನಿರ್ದೇಶಕರುಗಳಾದ ಮಂಜೇಗೌಡ, ನಂಜೇಗೌಡ, ವಸಂತ ,ಪ್ರಕಾಶ್, ಬೋರೇಗೌಡ ಮೋಹನ್ ಕುಮಾರ್, ಸಿಇಓ ಲತಾಮಣಿ, ಸೇರಿದಂತೆ ಇತರ ಹಾಜರಿದ್ದರು

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *