ಬೇಲೂರು : ತಾಲ್ಲೂಕಿನ ಹಳೇಬೀಡು ಹೋಬಳಿ ರಾಜನಶಿರಿಯೂರು ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿನ ನರಸೀಪುರ ಗ್ರಾಮದಲ್ಲಿ ಮೊನ್ನೆ ಈಜಲು ತೆರಳಿದ ಒಂದೇ ಕುಟುಂಬದ ಮೂವರು ಮಕ್ಕಳು ದೀಕ್ಷ (೧೦) ನಿತ್ಯ(೧೨) ಮತ್ತು ಕುಸುಮ (೮) ವರುಷ ಮಕ್ಕಳು ಸಾವನ್ನಪ್ಪಿದರು.
ಅವರನ್ನು ಇದೇ ಗ್ರಾಮದಲ್ಲಿ ಅಂತ್ಯಕ್ರಿಯೆ ನಡೆಸಲಾಯಿತು.
ನಿನ್ನೆ ರಾತ್ರಿ ಕೆಲ ದುರ್ಷರ್ಮಿಗಳು ನಿತ್ಯ(೧೨) ಈಕೆಯ ಶವ ಹೊತ ಜಾಗವನ್ನು ಎರಡು ಅಡಿಯಷ್ಟು ಬಗೆದಿದ್ದು, ಪೋಷಕರು ಗಾಬರಿಗೊಂಡು ಪೋಲಿಸರಿಗೆ ವಿಷಯ ತಿಳಿಸಿದ್ದು ಸ್ಥಳಕ್ಕೆ ಬೇಲೂರು ಹಳೇಬೀಡು ವೃತ್ತ ನಿರೀಕ್ಷಕರು ಮತ್ತು ಬೇಲೂರು ತಹಸೀಲ್ದಾರ್ ಎಂ.ಮಮತ ಮತ್ತು ಹಳೇಬೀಡು ಪಿಎಸ್ ಐ ಹಾಗೂ ತನಿಖಾ ತಂಡ ಆಗಮಿಸಿ ಸ್ಥಳ ಪರಿಶೀಲನೆ ನಡೆಸಲಾಗಿದೆ