
ಸಕಲೇಶಪುರ : ಐತಿಹಾಸಿಕ ಪ್ರವಾಸಿತಾಣಗಳಲ್ಲಿ ಒಂದಾದ ಸಕಲೇಶಪುರ ತಾಲೂಕಿನ ದೋಣಿಗಾಲ್ ಸಮೀಪವಿರುವ ಅಡಾಣಿ ಗುಡ್ಡದ ಮೇಲೆ ಇರುವ ಟಿಪ್ಪು ಸುಲ್ತಾನ್ ನಿರ್ಮಾಣದ ಭಾರತೀಯ ಪ್ರಾಚ್ಯವಸ್ತು ಇಲಾಖೆಯ ವ್ಯಾಪ್ತಿಗೆ ಬರುವ ಮಂಜ್ರಾಬಾದ್ ಕೋಟೆಗೆ ಹೋಗುವ ಜಾಗದಲ್ಲಿ ನಾಮಪಲಕ ವಿಲ್ಲದಿರುವುದಕ್ಕೆ ಪ್ರವಾಸಿಗರು ಕೋಟೆಗೆ ಹೋಗಲು ದಾರಿ ಹುಡುಕಬೇಕಾದ ಪರಿಸ್ಥಿತಿ ಉಂಟಾಗಿದ್ದು ಕೂಡಲೇ ಸಂಬಂದಪಟ್ಟ ಇಲಾಖೆಯವರು ನಾಮಪಲಕ ಅಳವಡಿಸುವಂತೆ ಪ್ರವಾಸಿಗರೊಬ್ಬರು ಒತ್ತಾಯಿಸಿದ್ದಾರೆ.

