
ಆಲೂರು : ತಾಲ್ಲೂಕಿನ ಕರವೇ ಉಸ್ತುವಾರಿಗಳು ಸತತ 16ನೇ ವರ್ಷದಿಂದ ಸರ್ಕಾರಿ ಶಾಲೆಗಳಿಗೆ ಸಮವಸ್ತ್ರ ವಿತರಿಸುವ ಕಾರ್ಯವನ್ನು ಈ ವರ್ಷವೂ ಕೂಡ ಮುಂದುವರಿಸಿಕೊಂಡು ಬಂದಿದ್ದಾರೆ
ಸರ್ಕಾರಿ ಶಾಲೆ ಸಿಂಗೋಡನಹಳ್ಳಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಿಗೆ ಸಮವಸ್ತ್ರ ವನ್ನು ಇಂದು ವಿತರಿಸಿದರು
ಇದೇ ಸಂದರ್ಭದಲ್ಲಿ ಪಾಳ್ಯ ಗ್ರಾಮ ಪಂಚಾಯತಿಯ ಘಟಪ್ರಭಾಧ್ಯಕ್ಷರಾದ ಪ್ರಕಾಶ್ ರವರು ಶಿಕ್ಷಣ ಸಂಯೋಜಕರಾದ ಜಯಣ್ಣ, ರವಿ, ಮುಖ್ಯೋಪಾಧ್ಯಾಯರಾದ ನಾಗರಾಜ್, ಸಹ ಶಿಕ್ಷಕಿ ಅಜರ ರವರು, ಶಿಕ್ಷಕ ಷಣ್ಮುಖಪ್ಪ ಹಾಗೂ ಗ್ರಾಮದ ಗ್ರಾಮಸ್ಥರು ಪೋಷಕರು ವಿದ್ಯಾರ್ಥಿಗಳು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು
ಈ ಸಂದರ್ಭದಲ್ಲಿ ಶಾಲೆಗೆ ಸಮವಸ್ತ್ರವನ್ನು ನೀಡಿದ ಲಯನ್ ರಘು ಪಾಳ್ಯ ಸರ್ವೆ ಜಿಲ್ಲಾ ಕಾರ್ಯದರ್ಶಿ ಹಾಗೂ ಆಲೂರು ಸಕಲೇಶಪುರ ತಾಲೂಕಿನ ಕರವೇ ಉಸ್ತುವಾರಿಗಳಾದ ರಘು ಪಾಳ್ಯ ರವರಿಗೆ ಅಭಿನಂದಿಸಲಾಯಿತು.






