
ಸಕಲೇಶಪುರ : ಹೆತ್ತೂರು ಗ್ರಾಮಪಂಚಾಯಿತಿ ಹೆತ್ತೂರು ಬಿ ಬ್ಲಾಕ್ ಗ್ರಾಮದಲ್ಲಿ ಕಳೆದ 15 ದಿನದಿಂದ ಬಾರಿ ಗಾಳಿ ಮಳೆಗೆ ಯಶೋಧ. ಕೃಷ್ಣಮೂರ್ತಿ ಹಾಗೂ ದೇವಕಿ ಅವರ ಮನೆಗಳು ಕುಸಿದಿದ್ದು.. ಇಂದು ಸ್ಥಳಕ್ಕೆ ಸಮಾಜ ಸೇವಕರು ಹಾಗೂ ಕಾಂಗ್ರೆಸ್ ಯುವ ಮುಖಂಡರಾದ ಬಾಚಿಹಳ್ಳಿ ಪ್ರತಾಪ್ ಗೌಡ್ರು ಭೇಟಿ ನೀಡಿ ಅಲ್ಲಿಯ ಪರಿಸ್ಥಿತಿ ತಿಳಿದು ಕುಟುಂಬಕ್ಕೆ ಬೆಡ್ ಶೀಟ್. ಚಾಪೆ ಸೇರಿದಂತೆ ಹಣದ ಸಹಾಯ ಮಾಡಿದರು
ಮುಂದಿನ ದಿನಗಳಲ್ಲಿ ಸರ್ಕಾರದ ಸವಲತ್ತುಗಳನ್ನು ಕಲ್ಪಿಸಿ ಕೊಡುವ ನಿಟ್ಟಿನಲ್ಲಿ ಅನುಸರಿಸಬೇಕಾದ ಕ್ರಮಗಳನ್ನು ಆದಷ್ಟು ಬೇಗ ಮಾಡಿ ಸೌಲಭ್ಯಗಳನ್ನು ಕಲ್ಪಿಸಿ ಕೊಡುವ ಭರವಸೆ ನೀಡಿದ್ದಾರೆ



