
ಸಕಲೇಶಪುರ :- ಸಕಲೇಶಪುರ ಉಪ ವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಯಾಗಿ ಇಂದು ಎಂ. ಕೆ ಮಧುಸೂದನ್ ಅಧಿಕಾರ ಸ್ವೀಕಾರ ಮಾಡಿದ್ದಾರೆ.
ಈ ಹಿಂದೆ ವಿರಾಜಪೇಟೆಯಲ್ಲಿ ಸೇವೆ ಸಲ್ಲಿಸಿದ ಇವರು ತಾಲ್ಲೂಕಿನಲ್ಲಿ ಅತಿ ಪ್ರಾಮಾಣಿಕ ಹಾಗೂ ದಕ್ಷ ಅಧಿಕಾರಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರು .
ಈಗ ಸಕಲೇಶಪುರ ತಾಲ್ಲೂಕಿಗೆ ಉಪ ವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಯಾಗಿ ಅಧಿಕಾರ ಸ್ವೀಕರಿಸಿದ ಇವರಿಗೆ ತಾಲೂಕಿನ ಜ್ವಲಂತ ಸಮಸ್ಯೆಗಳಾದ ಕಾಡಾನೆ ಹಾಗೂ ಅರಣ್ಯ ಒತ್ತುವರಿಗೆ ಸಂಬಂಧಿಸಿದಂತ ಸಮಸ್ಯೆಗಳಿಗೆ ಯಾವ ರೀತಿ ಸ್ಪಂದಿಸಿ ಇಲ್ಲಿಯೂ ಕೂಡ ಅದೇ ದಕ್ಷತೆಯನ್ನು ಮೆರೆಯಲಿ ಎಂಬ ಆಶಾಭಾವನೆಯನ್ನು ತಾಲ್ಲೂಕಿನವರು ಎದುರು ನೋಡುತ್ತಿದ್ದಾರೆ.
