
ಹಾಸನ ಜಿಲ್ಲಾ ಅರಕಲಗೂಡು ತಾಲ್ಲೂಕು ರಾಮನಾಥಪುರದ ಶ್ರೀ ರಾಘವೇಂದ್ರಸ್ವಾಮಿ ಸಭಾಂಗಣದಲ್ಲಿ ನಡೆದ ಪರಿಷತ್ತಿನ ಸಭೆಯಲ್ಲಿ ಸಕಲೇಶಪುರ ತಾಲ್ಲೂಕು ನೂತನ ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷರಾಗಿ ಲೋಹಿತ್ ಕೌಡಹಳ್ಳಿ ಅವರಿಗೆ ಅಧ್ಯಕ್ಷರ ನೇಮಕಾತಿ ಪತ್ರವನ್ನು ಹಾಸನ ಜಿಲ್ಲಾ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರು ಎಂ.ಎನ್. ಕುಮಾರಸ್ವಾಮಿ ನೀಡಿದರು.
ಈ ಸಂದರ್ಭದಲ್ಲಿ ತಾಲ್ಲೂಕು ಯುವ ಘಟಕದ ಅಧ್ಯಕ್ಷರು ಕೇರಳಾಪುರ ವಿನಯ್, ಸದಸ್ಯರಾದ ಸದಸ್ಯರಾದ ಸಕಲೇಶಪುರ ಎಚ್.ಅರ್. ಸೋಮಶೇಖರ್, ದೊಡ್ಡಬೋಮ್ಮನಹಳ್ಳಿ ಬಿ.ಎನ್. ಮೋಕ್ಷ, ಅನಂದ, ರೇವಣ್ಣ, ಧರ್ಮ, ಇದ್ದರು.



