
ಸಕಲೇಶಪುರ ಆಲೂರು ಕಟ್ಟಾಯ ವಿಧಾನಸಭಾ ಕ್ಷೇತ್ರದ ಬಿಜೆಪಿ ಪಕ್ಷದ ವತಿಯಿಂದ ಇಂದು ಬಾಳುಪೇಟೆಯ ಕೆಂಚಮ್ಮ ಮಲ್ಲೇಗೌಡ ಸಮುದಾಯ ಭವನದಲ್ಲಿ ನೂತನ ಶಾಸಕ ಸಿಮೆಂಟ್ ಮಂಜುಗೆ ಅಭಿನಂದನೆ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು .ಈ ಸಂದರ್ಭದಲ್ಲಿ ಅರಕಲಗೂಡು ಕ್ಷೇತ್ರದ ಮಾಜಿ ಶಾಸಕರಾದ ಎಂ ಟಿ ರಾಮಸ್ವಾಮಿಯವರಿಗೆ ಸಿಮೆಂಟ್ ಮಂಜುರವರಿಂದ ಸನ್ಮಾನಿಸಲಾಯಿತು.ಈ ಕಾರ್ಯಕ್ರಮದಲ್ಲಿ ಬಿಜೆಪಿ ಮುಖಂಡರಾದ ಹುರುಡಿ ವಿಶ್ವನಾಥ್, ಗುರುದೇವ್, ಮಲ್ಲಿಕಾರ್ಜುನ,ನೇತ್ರ ಮಂಜುನಾಥ, ಮೋಹನ ಗುಲಗಳಲೆ, ಲೋಹಿತ್ ಜಂಬರಡಿ,ಮಾಜಿ ಅಧ್ಯಕ್ಷರಾದ ಪ್ರತಾಪ್, ಆಲೂರು ಅಧ್ಯಕ್ಷರು ನಾಗರಾಜ್ ,ಜಾನೆಕೆರೆ ಲೋಕೇಶ್, ಕೊಲ್ಲಹಳ್ಳಿ ಬಾಲು ಇತರರು ಇದ್ದರು.



