
ಸಕಲೇಶಪುರ : ಪುರಸಭೆಗೆ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಜ್ಯೋತಿ ಆರ್ ಬಿ ಹಾಗೂ ಉಪಾಧ್ಯಕ್ಷರಾದ ಜರಿನಾ ಎಸ್ ಐ ಅವರಿಗೆ ಸಕಲೇಶಪುರ ಕುಳುವ ಸಮಾಜ ಸಂಘದ ವತಿಯಿಂದ ಅದ್ದೂರಿ ಸನ್ಮಾನ ಮಾಡಲಾಯಿತು.
ಈ ಸಂದರ್ಭದಲ್ಲಿ ಕುಳುವ ಸಮಾಜ ಸಂಘದ ಅಧ್ಯಕ್ಷರಾದ ಮೋಹನ್ ಕುಮಾರ್ ಆರ್, ಉಪಾಧ್ಯಕ್ಷರಾದ ವಿಶ್ವನಾಥ್ ಎಸ್, ಆರ್, ಕಾರ್ಯದರ್ಶಿ ಮಂಜು ಶೆಟ್ಟಿ, ಸಹ ಕಾರ್ಯದರ್ಶಿ ಕೃಷ್ಣ ಎಸ್ ವಿ, ಖಜಾಂಚಿ ಲೋಕೇಶ್ ಎಸ್, ಆರ್, ಹಾಗೂ ಮಾಜಿ ಅಧ್ಯಕ್ಷರು ಹಾಗೂ ಹಾಲಿ ಸದಸ್ಯರಾದ ಆದರ್ಶ ಎಸ್ ಡಿ, ಸಂಘಟನಾ ಕಾರ್ಯದರ್ಶಿ ನಾಗರಾಜ್ ಎಸ್ ಎಲ್ ಮತ್ತು ನಿರ್ದೇಶಕರುಗಳಾದ ಸೋಮಶೇಖರ್, ಆನಂದ್ ಡಿ, ಧರ್ಮಣ್ಣ ಸೇರಿದಂತೆ ಇತರರು ಹಾಜರಿದ್ದರು.
