ಸಕಲೇಶಪುರ : ಬಜರಂಗದಳ ಕಾರ್ಯಕರ್ತರು ಸಕಲೇಶಪುರದಲ್ಲಿ ಪ್ರತಿಷ್ಠಾಪನೆ ಮಾಡುವ ಹಿಂದೂ ಮಹಾಗಣಪತಿ ಬೆಳಗ್ಗಿನ ಜಾವ 3 ಗಂಟೆಗೆ ಬೆಂಗಳೂರಿನಿಂದ ರಾಮಧೂತ ಹಿಂದೂ ಮಹಾಗಣಪತಿ ವ್ಯವಸ್ಥಾಪನಾ ಸಮಿತಿ ಸಂಚಾಲಕ್ ಪ್ರದೀಪ್ ಪೂಜಾರಿ ಒಡೆತನದ ಗಣಪತಿ ಟ್ರಾನ್ಸ್ಪೋರ್ಟ್ ಲಾರಿ ಮುಖಾಂತರ ಹೊರಟು. ಬರೋಬ್ಬರಿ 250 ಕಿಲೋಮೀಟರ್ ದೂರದಿಂದ ಇಂದು ಮಧ್ಯಾಹ್ನ 12 ಗಂಟೆಗೆ ಸಕಲೇಶಪುರ ತಲುಪಿದೆ.

ದಿನಾಂಕ 06/09/2024 ರಂದು ಬಾಳೆಗದ್ದೆ ಗ್ರಾಮದಿಂದ ಸಂಜೆ ಮೆರವಣಿಗೆ ಮುಖಾಂತರ ಗಣಪತಿ ಪೆಂಡಾಲ್’ಗೆ ತಲುಪಲಿದೆ.

ದಿನಾಂಕ 07/09/2024 ರಂದು ವಿಶೇಷ ಪೂಜಾ ಕೈಂಕರ್ಯಗಳೊಂದಿಗೆ ಪ್ರತಿಷ್ಠಾಪನೆ ಗೊಳ್ಳಲಿದೆ.

ದಿನಾಂಕ 12/09/2024 ರಂದು ವಿಶೇಷ ವಾದ್ಯಗೋಷ್ಠಿಗಳೊಂದಿಗೆ ನಗರದಲ್ಲಿ ಬೃಹತ್ ಶೋಭಾಯಾತ್ರೆ ನಡೆಸಿ ತಾಲ್ಲೂಕಿನ ಜೀವನಾಡಿ ಹೇಮಾವತಿ ನದಿಯಲ್ಲಿ ವಿಸರ್ಜನೆ ಮಾಡಲಾಗುತ್ತದೆ..

ಈ ಎಲ್ಲಾ ಕಾರ್ಯಕ್ರಮಗಳಿಗೆ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಎಂದು ಆಯೋಜಕರು ಮನವಿ ಮಾಡಿದ್ದಾರೆ.

By tv46malenadu

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *

You missed