ಎತ್ತಿನ ಹೊಳೆ ಕುಡಿಯುವ ನೀರಿನ ಯೋಜನೆ ನಾಳೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಂದ ಲೋಕಾರ್ಪಣೆಗೊಳ್ಳಲಿದ್ದುಇಂದು ಸಂಜೆ 8-30 ಕ್ಕೆ ವಿಯರ್ ಮೂರರ ದೊಡ್ಡನಾಗರದಲ್ಲಿ ಡಿಸಿಎಂ ಡಿಕೆ ಶಿವಕುಮಾರ್ ಅವರು ಯಾವುದೇ ವಿಘ್ನ ಆಗಬಾರದು ಎಂದು ಪೂಜೆ ಸಲ್ಲಿಸಿ ಹೋಮ ಹವನ ನೆರವೇರಿಸಿದರು.
ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆಯಾದ ಎತ್ತಿನ ಹೊಳೆ ಕುಡಿಯುವ ನೀರಿನ ಯೋಜನೆ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಅವರಿಂದ ಗೌರಿ ಹಬ್ಬದಂದು ಬೆಳಗ್ಗೆ ಬಾಗಿನ ಬಿಡುವ ಮೂಲಕ ಲೋಕಾರ್ಪಣೆಯಾಗಲಿದ್ದು ಗೌರಿ ಹಬ್ಬದ ಮುನ್ನ ದಿನವಾದ ಇಂದು ಉಪಮುಖ್ಯ ಮಂತ್ರಿ ಡಿಕೆ ಶಿವಕುಮಾರ್ ಅವರು ಪೂಜೆ ಸಲ್ಲಿಸುವ ವೇಳೆ ಹಾಕುವ ಸಾಂಪ್ರದಾಯಿಕ ಉಡುಗೆಯೊಂದಿಗೆ ಹೋಮ ಹವನ ಪೂಜೆ ಸಲ್ಲಿಸಿದರು.