ಸಕಲೇಶಪುರ : ಹಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಕುಶಾಲನಗರ ಬಡಾವಣೆಯ ದಲಿತ ಚಳುವಳಿಯ ಹೋರಾಟಗಾರ ಲಕ್ಷ್ಮಣ್ ಕೀರ್ತಿ ಅವರ ಹಿರಿಯ ಸಹೋದರ ಎಸ್.ಎಸ್.ಮಂಜುನಾಥ್ (60) ಅವರು ಇಂದು ಸಂಜೆ ಸುಮಾರು 5 ಘಂಟೆ ಸಮಯದಲ್ಲಿ ತಮ್ಮ ನಿವಾಸದಲ್ಲಿ ನಿಧನ ಹೊಂದಿದ್ದು ಮೃತರು ಎರಡು ಗಂಡು ಮಕ್ಕಳು ಒಬ್ಬ ಹೆಣ್ಣು ಮಗಳು ಹಾಗೂ ಮೊಮ್ಮಕ್ಕಳನ್ನು ಅಗಲಿದ್ದಾರೆ,ಮೃತರ ಅಂತ್ಯಕ್ರಿಯೆ ನಾಳೆ ಮದ್ಯಾಹ್ನ ಪ್ರೇಮನಗರ ಬಡಾವಣೆಯ ಲ್ಲಿರುವ ಪರಿಶಿಷ್ಟ ಸಮಾಜದ ರುಧ್ರಭೂಮಿಯಲ್ಲಿ ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.