
ಇಂದು ಸಕಲೇಶಪುರ ತಾಲ್ಲೂಕು ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘ ನಿಯಮಿತ (TAPCMS Ltd) ವತಿಯಿಂದ ಸಕಲೇಶಪುರ ಆಲೂರು ಕಟ್ಟಾಯ ವಿಧಾನಸಭಾ ಕ್ಷೇತ್ರದ ನೂತನ ಶಾಸಕರಾದ ಸಿಮೆಂಟ್ ಮಂಜುರವರಿಗೆ ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷರು ಯು. ಪಿ. ಶಶಿಕುಮಾರ್, ಉಪಾಧ್ಯಕ್ಷರು ವಜ್ರ ಲೋಕೇಶ್, ಮಾಜಿ ಅಧ್ಯಕ್ಷರು, ಹಾಲಿ ನಿರ್ದೇಶಕರು ಲೋಹಿತ್ ಕೌಡಳ್ಳಿ, ಕಾರ್ಯದರ್ಶಿ ಲೋಕೇಶ್, ನಿರ್ದೇಶಕರುಗಳಾದ ರಮೇಶ್ ಹೆಚ್. ಎಂ, ಫೈರೋಜ್, ಉಮೇಶ್, ರವಿತೇಜ, ಗುರುಲಿಂಗಪ್ಪ, ರವಿಕುಮಾರ್, ರಮೇಶ್ ಕರಗೂರ್, ಸಹನಾ, ದೇವರಾಜು ಉಪಸ್ಥಿತರಿದ್ದರು.


