
ಹಾಸನ : ಹಾಸನ ತಾಲೂಕಿನ ದುದ್ದ ಹೋಬಳಿಯ ಜೋಡಿಕೃಷ್ಣಾಪುರ ಗ್ರಾಮದಲ್ಲಿ ಕೃಷಿ ಮಹಾವಿದ್ಯಾಲಯದ ಅಂತಿಮ ವರ್ಷದ ಬಿ.ಎ.ಸ್ಸಿ [ಹಾನ್ಸ್] ವಿದ್ಯಾರ್ಥಿಗಳು ಗ್ರಾಮೀಣ ಕೃಷಿ ಕಾರ್ಯಾನುಭವ ಶಿಬಿರದ ಅಂಗವಾಗಿ ಜೋಡಿಕೃಷ್ಣಾಪುರದಲ್ಲಿ ಜೈವಿಕ ಇಂಧನ ಮರಗಳ ಉಪಯೋಗ ಕಾರ್ಯಕ್ರಮವನ್ನು ಆಯೋಜಿಸಿದರು.
ಇತ್ತೀಚಿನ ದಿನಗಳಲ್ಲಿ ಅತಿಯಾದ ವಾಹನಗಳ ಸಂಕೆಯಿಂದ ಇಂಧನ ಬಳಕೆಯಿಂದ ಪರಿಸರ ಮಾಲಿನ್ಯ ಹೆಚ್ಚಾಗೂತಿದ್ದು , ಇದನ್ನು ತಡೆಗಟ್ಟಲು ವಿಜ್ಞಾನವು ವಾಹನಗಳಿಗೆ ಮಾಲಿನ್ಯಕರವಲ್ಲದ ಜೈವಿಕ ಇಂಧನವನ್ನು ಮಿಶ್ರಣ ಮಾಡಿ ಬಳಸುವ ಸಲಹೆಯನ್ನು ನೀಡಿದ್ದಾರೆ. ಇದನ್ನು ಗ್ರಾಮಸ್ಥರಿಗೆ ಪರಿಚಯಿಸಲು ವಿದ್ಯಾರ್ಥಿಗಳು ಈ ಕಾರ್ಯಕ್ರಮವನ್ನು ಕೈಗೊಂಡರು.
ಈ ಕಾರ್ಯಕ್ರಮಕ್ಕೆ ಸಂಪನ್ಮೂಲ ವ್ಯಕ್ತಿಗಳಾಗಿ ಜೈವಿಕ ಇಂಧನ ಉಧ್ಯಾನದ ತಂತ್ರಜ್ಞರಾದ ರಘುಕುಮಾರ್ ರವರು ಹಾಗೂ ಗ್ರಾಮಸ್ಥರಾದ ಕುಮಾರ ಅಣ್ಣ ಮತ್ತು ವೆಂಕಟೇಶ್ ರವರು ಪಾಲ್ಗೊಂಡಿದ್ದರು.
ಈ ಕಾರ್ಯಕ್ರಮದಲ್ಲಿ ಮಾತನಾಡಿದ ರಘುಕುಮಾರ್ , ಜೈವಿಕ ಇಂಧನ ಮರಗಳ ಮಹತ್ವ , ಉಪಯೋಗ ಹಾಗೂ ಅವುಗಳ ಉಪಉತ್ಪನ್ನಗಳ ಬಗ್ಗೆ ತಿಳಿಸಿದರು.
“ಮನೆಗೊಂದು ಮರ ಊರಿಗೊಂದು ವನ” ಎಂಬ ಗಾದೆಯಂತೆ ಎಲ್ಲರಲ್ಲೂ ಜೈವಿಕ ಇಂಧನ ಮರ ನೆಡಲು ಉತ್ತೇಜಿಸಿದರು.
ಈ ಕಾರ್ಯಕ್ರಮದ ಅಂಗವಾಗಿ ಗ್ರಾಮಸ್ಥರಿಗೆ ಜೈವಿಕ ಇಂಧನ ಮರಗಳಾದ ಹೊಂಗೆ, ಜತ್ರೋಪ, ಸೀಮರೂಭಾ, ಬೇವು ಮತ್ತಿ ಇತರೆ ಮರಗಳನ್ನು ಗ್ರಾಮಸ್ಥರಿಗೆ ಉಚಿತವಾಗಿ ನೀಡಿ ಗ್ರಾಮಸ್ಥರನ್ನು ಪ್ರೋತ್ಸಾಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.
