ಸಕಲೇಶಪುರ. ಸಂವಿಧಾನ ಓದು ಕರ್ನಾಟಕ ಸಂಘಟಕರ ಸಂಯುಕ್ತ ಆಶ್ರಯದಲ್ಲಿ ಸಂವಿಧಾನ ಓದು ಅಧ್ಯಯನ ಶಿಬಿರವನ್ನು ಜಸ್ಟಿಸ್ ನಾಗಮೋಹನ್ ರವರ ಮಾರ್ಗದರ್ಶನದಂತೆ ಆಯ್ದ ನೂರು ಜನಕ್ಕೆ ನವೆಂಬರ್ 8 ಮತ್ತು 9 ರಂದು ಪಟ್ಟಣದ ಅಂಬೇಡ್ಕರ್ ಭವನದಲ್ಲಿ ಎರಡು ದಿನಗಳ ಕಾಲ ಸಂವಿಧಾನ ಓದು ಅಧ್ಯಾಯನ ಶಿಬಿರವನ್ನು ಆಯೋಜಿಸಲಾಗಿದೆ.

ಈ ಒಂದು ವಿಶಿಷ್ಟ ಮತ್ತು ವಿನೂತನವಾದ ಸಂವಿಧಾನ ಓದು ಅಧ್ಯಯನ ಶಿಬಿರವನ್ನು ತಾಲೂಕಿನ ವಿವಿಧ ಪ್ರಗತಿಪರ ಸಂಘಟನೆಗಳ ಮುಖಂಡರು, ಸದಸ್ಯರು, ದಲಿತ ಸಂಘಟನೆಯ ಮುಖಂಡರು, ಅಲ್ಪಸಂಖ್ಯಾತ ಸಂಘಟನೆಗಳ ಮುಖಂಡರು, ಸಂವಿಧಾನ ಚಿಂತಕರು, ವಿದ್ಯಾರ್ಥಿಗಳು ಹಾಗೂ ಮಹಿಳೆಯರು ಸಹಕರಿಸಿ ಈ ಕಾರ್ಯಕ್ರಮವನ್ನು ಯಶಸ್ವಿ ಮಾಡಿಕೊಡಬೇಕಾಗಿ ಸಂವಿಧಾನ ಓದು ಕರ್ನಾಟಕದ ರಾಜ್ಯ ಸಂಘಟಕರಾದ ರಾಜು ಗೊರೂರು, ಜಿಲ್ಲಾ ಸಂಘಟಕರಾದ ರಾಜಶೇಖರ್ ಡಿ ಎಸ್, ರಾಜ್ಯ ಸಂಯೋಜಕರಾದ ಅಣ್ಣಯ್ಯ, ಜಿಲ್ಲಾ ಸಂಚಾಲಕರಾದ ನಾಗರಾಜ್, ತಾಲೂಕು ಸಂಚಾಲಕರಾದ ಧರ್ಮರಾಜ್, ಮನವಿ ಮಾಡಿಕೊಂಡಿರುತ್ತಾರೆ.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *