ಹಾಸನ : ಪಾರ್ಥೇನಿಯಂ ನಿರ್ಮೂಲನೆ : ನಮ್ಮ ಸಮುದಾಯದ ಸ್ವಚ್ಛತೆಗಾಗಿ ಕೈಜೋಡಿಸೋಣ ಎಂಬ ಧ್ಯೇಯ ವಾಕ್ಯದಿಂದ ಪಾರ್ಥೇನಿಯಂ ಹುಲ್ಲು ನಮ್ಮ ಪರಿಸರ, ಆರೋಗ್ಯ ಮತ್ತು ಕೃಷಿಯ ಮೇಲೆ ದುಷ್ಪರಿಣಾಮ ಬೀರುತ್ತದೆ. ಇದನ್ನು ನಮ್ಮ ಸುತ್ತಮುತ್ತಲಿನ ಪರಿಸರದಿಂದ ನಿರ್ಮೂಲನೆ ಮಾಡಲು ನಾವು ಕೈಜೋಡಿಸಬೇಕು ಎಂದು ಶಿಬಿರಾರ್ಥಿ ಐಶ್ವರ್ಯ ಬಾಬುಶೆಟ್ಟಿ ತಿಳಿಸಿದರು.

ಇಲ್ಲಿನ ದುದ್ದ ಹೋಬಳಿಯ ಜೋಡಿಕೃಷ್ಣಾಪುರ ಗ್ರಾಮದಲ್ಲಿ ಕಾರಕೆರೆ ಕೃಷಿ ವಿದ್ಯಾರ್ಥಿಗಳು ನಡಿಸುತ್ತಿರುವ ಗ್ರಾಮೀಣ ಕೃಷಿ ಕಾರ್ಯಾನುಭವ ಶಿಬಿರದಲ್ಲಿ ಮಾತನಾಡಿದ ಬಾಬುಶೆಟ್ಟಿ ಪಾರ್ಥೇನಿಯಂ ಹುಲ್ಲಿನ ಪರಿಣಾಮಗಳನ್ನು ತಿಳಿಸಿದರು.

ಚರ್ಮದ ಉರಿತ ಮತ್ತು ಶ್ವಾಸಕೋಶದ ಸಮಸ್ಯಗಳು ಮನುಷ್ಯರಲ್ಲದರೆ ಬೆಳೆಯಲ್ಲಿ ಇಳುವರಿ ಕಡಿಮೆಯಾಗುವುದು ಮತ್ತು ಪಶುಗಳ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ.ನೆಲದ ಮೇಲೆ ನೆಲದ ಗುಣಮಟ್ಟ ಮತ್ತು ಜೀವವೈವಿಧ್ಯತೆಯನ್ನು ಹನಿಗೊಳಿಸುತ್ತದೆ. ಈ ಹಾನಿಕಾರಿಕ ಕಳೆಯನ್ನು ಕೈಯಿಂದ ತೆಗೆದು ಹಾಕುವುದು ಮತ್ತು ವಿಸರ್ಜನೆ ಮಾಡಬಹುದು ಅಥವಾ ರಾಸಾಯನಿಕ ನಿಯಂತ್ರಣೆ ಮಾಡಬಹುದು. ಇದರೊಂದಿಗೆ ಪಾರ್ಥೇನಿಯಂ ಸಸ್ಯಗಳನ್ನು ಕಂಪೋಸ್ಟಿಂಗ್ನಲ್ಲಿ ಬಳಸುವ ಪ್ರಯೋಜನಗಳನ್ನು ತಿಳಿಸಿದರು.

ಎಲ್ಲಾ ರೀತಿಯ ಮಣ್ಣುಗಳಿಗೆ ಸೂಕ್ತವಾದ ಎರಡು ಬಗೆಯ ಕಾಂಪೋಸ್ಟ್ ಮಾಡಬಹುದು.• ಕಾಂಪೋಸ್ಟ್ ಮಾಡುವ ಮೂಲಕ ಪಾರ್ಥೇನಿಯಂ ಸಸ್ಯಗಳನ್ನು ನಿಯಂತ್ರಿಸಬಹುದು.•ಕಂಪೋಸ್ಟ್ ಮಾಡಿದ ಪಾರ್ಥೇನಿಯಂ ಸಸ್ಯಗಳು ಉತ್ತಮ ಗೊಬ್ಬರವಾಗಿ ಪರಿವರ್ತನೆಯಾಗುತ್ತದೆ.• ಇದು ಮಣ್ಣಿನ ಫಲವತ್ತತೆಯನ್ನು ಹೆಚ್ಚಿಸುತ್ತದೆ ಮತ್ತು ಸಸ್ಯಗಳ ಬೆಳೆವಣಿಗೆಯನ್ನು ಉತ್ತೇಜಿಸುತ್ತದೆ.

ಈ ಸಂದರ್ಭದಲ್ಲಿ ಉಪನ್ಯಾಸಕರಾದ ಡಾ.ಅರವಿಂದ್ ಕುಮಾರ್. ಮ್. ಕೆ , ಗ್ರಾಮಸ್ಥರಾದ ಮಂಜೇಗೌಡ್ರು,ಕುಮಾರಣ್ಣ,ದಿಲೀಪ್ ಮತ್ತು ಶಿಬಿರಾರ್ಥಿಗಳು ಹಾಜರಿದ್ದರು.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *