
ಸಕಲೇಶಪುರ : ಪಟ್ಟಣದ ಪ್ರೇಮ ನಗರ ಬಡಾವಣೆ ಯಲ್ಲಿರುವ ಕಪ್ಪಿನ ಕೋಡಿ ಚೌಡೇಶ್ವರಿ ದೇವಸ್ಥಾನಕ್ಕೆ ಭೇಟಿ ನೀಡಿದ ನೂತನ ಶಾಸಕ ಸಿಮೆಂಟ್ ಮಂಜು ಹಾಗೂ ವಿಶ್ವ ಹಿಂದೂ ಪರಿಷತ್ ರಾಜ್ಯ ಮುಖಂಡ ಸಕಲೇಶಪುರ ರಘು ಪೂಜೆಯಲ್ಲಿ ಭಾಗಿಯಾದ ಸಂದರ್ಭದಲ್ಲಿ ದೇವಸ್ಥಾನ ಮಂಡಳಿಯ ವತಿಯಿಂದ ನೂತನ ಶಾಸಕರಿಗೆ ಸನ್ಮಾನ ಮಾಡಲಾಯಿತುಹಾಗೆ ವಿ ಹೆಚ್ ಪಿ ಮುಖಂಡ ರಘು ರವರಿಗೂ ಸನ್ಮಾನ ಮಾಡಿದರು.ಈ ಸಂದರ್ಭದಲ್ಲಿ ಪ್ರದೀಪ್,ರವಿ, ರಮೇಶ್, ಕ್ಯಾಮನಹಳ್ಳಿ ರಾಜಕುಮಾರ್ ಇತರರು ಇದ್ದರು.



