
ಸಕಲೇಶಪುರ :- ಪ್ರಸಾದ್ ನೇತ್ರಾಲಯ,ಸೂಪರ್ ಸ್ಪೆಷಾಲಿಟಿ ಕಣ್ಣಿನ ಆಸ್ಪತ್ರೆ,ಮಂಗಳೂರು ಹಾಗೂ ನೇತ್ರಜ್ಯೋತಿ ಚಾರಿಟೇಬಲ್ ಟ್ರಸ್ಟ್ ಉಡುಪಿ ವತಿಯಿಂದ ಜಿಲ್ಲಾ ಅಂಧತ್ವ ನಿವಾರಣಾ ಸಂಸ್ಥೆ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಹಾಸನ ತಾಲೂಕು ತಾಲ್ಲೂಕು ಆರೋಗ್ಯ ಅಧಿಕಾರಿಗಳ ಕಛೇರಿ, ಸಕಲೇಶಪುರ ತಾಲೂಕು, ಹಾಸನ ಜಿಲ್ಲೆ ಪ್ರಾಥಮಿಕ ಆರೋಗ್ಯ ಕೇಂದ್ರ, ಶುಕ್ರವಾರಸಂತೆಯಲ್ಲಿ ದಿನಾಂಕ:-07-02-2025ನೇ ಶುಕ್ರವಾರದಂದು ಬೆಳಿಗ್ಗೆ ಘಂಟೆ 10.00 ರಿಂದ ಮಧ್ಯಾಹ್ನ 1.00ರ ವರೆಗೆ ಪ್ರಾಥಮಿಕ ಆರೋಗ್ಯ ಕೇಂದ್ರ, ಶುಕ್ರವಾರ ಉಚಿತ ನೇತ್ರ ತಪಾಸಣೆ ಮತ್ತು ಶಸ್ತ್ರ ಚಿಕಿತ್ಸಾ ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ.
ಸಾರ್ವಜನಿಕರು ಈ ಶಿಬಿರದ ಪ್ರಯೋಜನ ಪಡೆದುಕೊಳ್ಳಬೇಕಾಗಿ ವಿನಂತಿ.
ಸೂಚನೆಗಳು:1. ಶಿಬಿರಕ್ಕೆ ಬರುವವರು ಶುದ್ಧವಾಗಿಯೂ, ಮಾಸ್ಕ್ ಧರಿಸಿಕೊಂಡು ಹಾಗೂ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು.
2.ಪೊರೆಯಿದೆ ಎಂದು ತೀರ್ಮಾನಿಸಲ್ಪಟ್ಟವರನ್ನು ಮಂಗಳೂರಿನ ಪ್ರಸಾದ್ ನೇತ್ರಾಲಯಕ್ಕೆ ಶಸ್ತ್ರ ಚಿಕಿತ್ಸೆಗಾಗಿ ಕರೆದುಕೊಂಡು ಹೋಗಲಾಗುವುದು. ಶಸ್ತ್ರ ಚಿಕಿತ್ಸೆಗಾಗಿ ಬರುವವರು ಆಧಾರ್ ಕಾರ್ಡ್ ಜೆರಾಕ್ಸ್ ಹಾಗೂ ಮೊಬೈಲ್ ನಂ. ಕಡ್ಡಾಯವಾಗಿ ತರುವುದು.
3.ಶಸ್ತ್ರಚಿಕಿತ್ಸೆ ಔಷಧಿಗಳು, ಕಣ್ಣಿನಲ್ಲಿ ಅಳವಡಿಸುವ, ಲೆನ್ಸ್, ಊಟ, ತಂಗುವ ಸ್ಥಳ ಹಾಗೂ ಮಂಗಳೂರಿಗೆ ಹೋಗಿ ಬರುವ ಬಸ್ ವ್ಯವಸ್ಥೆ ಎಲ್ಲವೂ ಉಚಿತ.
4. ಈ ಸದವಕಾಶವನ್ನು ತಪ್ಪದೇ ಬಳಸಿಕೊಳ್ಳಿ ಹಾಗೂ ಎರಡು ದಿವಸಗಳಿಗೆ ಬೇಕಾಗುವ ಬಟ್ಟೆಗಳನ್ನು ತೆಗೆದುಕೊಂಡು ಬನ್ನಿ
5.ಶಸ್ತ್ರ ಚಿಕಿತ್ಸೆಗಾಗಿ ಆರಿಸಲ್ಪಡುವ ರೋಗಿಗಳು ಹೃದಯ, ರಕ್ತದ ಒತ್ತಡ, ಅಸ್ತಮಾ, ಸಕ್ಕರೆ ಕಾಯಿಲೆಗಳಿಂದ ನರಳುತ್ತಿದ್ದರೆ ಮುಂಚಿತವಾಗಿಯೇ ವೈದ್ಯರಿಂದ ಶಸ್ತ್ರ ಚಿಕಿತ್ಸೆಗೆ ಯಾವ ಅಡಚಣೆಯಿಲ್ಲವೆಂದು ಪ್ರಮಾಣ ಪತ್ರ ತಂದರೆ ಒಳ್ಳೆಯದು.
6.ಯಶಸ್ವಿನಿ ಕಾರ್ಡ್ ಹೊಂದಿದ್ದಲ್ಲಿ ಈ ಕೆಳಗಿನ ದಾಖಲೆಗಳನ್ನು ತರತಕ್ಕದ್ದು ಯಶಸ್ವಿನಿ ಕಾರ್ಡ್, ಹಣ ಪಾವತಿಸಿದ ರಶೀದಿ, ರೇಶನ್ ಕಾರ್ಡ್, ಆಧಾರ್ ಕಾರ್ಡ್
7.ಸುರಕ್ಷಾ ಕಾರ್ಡ್ ಹೊಂದಿದ್ದಲ್ಲಿ ಈ ಕೆಳಗಿನ ದಾಖಲೆಗಳನ್ನು ತರತಕ್ಕದ್ದು ಸುರಕ್ಷಾ ಕಾರ್ಡ್, ರೇಶನ್ ಕಾರ್ಡ್, ಆಧಾರ್ ಕಾರ್ಡ್ವಿವರಗಳಿಗೆ
ಸಂಪರ್ಕಿಸಿರಿ:-7259559198,7829643669
ದಿನಾಂಕ: 07-02-2025ನೇ ಶುಕ್ರವಾರಸಮಯ: ಬೆಳಿಗ್ಗೆ ಘಂಟೆ 10.00 ರಿಂದ ಮಧ್ಯಾಹ್ನ 1.00ರ ವರೆಗೆ
ಸ್ಥಳ: ಪ್ರಾಥಮಿಕ ಆರೋಗ್ಯ ಕೇಂದ್ರ, ಶುಕ್ರವಾರ
