ಹಾಸನ: ಆಗತಾನೆ ಹುಟ್ಟಿದ ನವಜಾತ ಶಿಶುವನ್ನು ಚರಂಡಿಗೆ ಬಿಸಾಡಿ ಹೋಗಿರುವ ಘಟನೆ ಭಾನುವಾರ ಮದ್ಯಾಹ್ನ ಬೆಳಕಿಗೆ ಬಂದಿದ್ದು, ಈ ದೃಶ್ಯ ನೋಡಿದ ಮಹಿಳೆಯರು ಮಗು ಬಿಸಾಡಿದವರ ಮೇಲೆ ಹಿಡಿಶಾಪ ಹಾಕತ್ತಿರುವುದು ಕಂಡು ಬಂದಿತು.

ಹೇಮಾವತಿ ನಗರದ ಕಾರ್ಮೆಲ್ ಚರ್ಚ್ ಬಳಿ ಇರುವ ಚರಂಡಿ ಒಳಗೆ ಈ ನವಜಾತ ಶಿಶುವನ್ನು ಒಂದು ಕವರ್ ಒಳಗೆ ಕಟ್ಟಿ ಬಿಸಾಡಿ ಹೋಗಿದ್ದಾರೆ.

ಆಗ ತಾನೆ ಹುಟ್ಟಿದ ಮಗುವನ್ನ ಚರಂಡಿಗೆ ಎಸೆದಿರೋ ಕಿರಾತಕರು. ಪ್ಲಾಸ್ಟಿಕ್ ಕವರ್‌ನಲ್ಲಿ ಕಸದ ಜೊತೆ ತುಂಬಿಕೊಂಡು ಬಂದು ಮಗುವನ್ನ ಎಸೆದು ಹೋಗಿರೋ ಪಾಪಿಗಳು.

ಚರಂಡಿಯಲ್ಲಿ ಬಿದ್ದ ಮಗು ಕಂಡ ಜನರು ಮರುಕ ವ್ಯಕ್ತಪಡಿಸಿದರು.

ಈ ಕಂದಮ್ಮನನ್ನು ನೋಡಿದ ಸ್ಥಳೀಯರು ಪೊಲೀಸರಿಗೆ ವಿಷಯ ಮುಟ್ಟಿಸಿದ್ದಾರೆ. ತಕ್ಷಣ ಪೊಲೀಸರು ಸ್ಥಳಕ್ಕೆ ಆಗಮಿಸಿದರು. ಇದೆ ವೇಳೆ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಆಗಮಿಸಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿದರು.

ಪೆನ್ಷನ್ ಮೊಹಲ್ಲಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ. ಈ ಮಗುವನ್ನು ನೋಡಲು ಸಾರ್ವಜನಿಕರು ನೂಕು ನುಗ್ಗಲಿನಲ್ಲಿ ನೋಡಿದರು. ಇನ್ನು ಮಹಿಳೆಯರು ಈ ದೃಶ್ಯವನ್ನು ನೋಡಿ ಹಿಡೀ ಶಾಪ ಹಾಕುತ್ತಿದ್ದರು.

ಯಾರೋ ಅಕ್ರಮವಾಗಿ ಪಡೆದ ಮಗುವನ್ನು ಬಿಸಾಡಿದ್ದಾರೆ. ಇಲ್ಲವೇ ಹೆಣ್ಣು ಮಗು ಹುಟ್ಟಿದೆ ಎಂದು ಸಾಕಾಲಾಗದೇ ಬಿಸಾಡಿರಬಹುದು ಎಂದು ಸಾರ್ವಜನಿಕರು ಅಲ್ಲಲ್ಲಿ ಗುಸುಗುಸು ಮಾತನಾಡುತ್ತಿರುವುದು ಕೇಳಿ ಬಂದಿತು.

By tv46malenadu

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *