ಸಕಲೇಶಪುರ : ಫೆಬ್ರವರಿ 3 ರಂದು ಸಕಲೇಶಪುರ ತಾಲೂಕು ಹಾನಬಾಳು ಹೋಬಳಿ ದೇವಾಲದಕೆರೆ ಗ್ರಾಮದಲ್ಲಿರುವ ಹೊಂಬಾಳೆ ಸುತ್ತಮುತ್ತ ಕಾಡುಕೋಣ ವೊಂದು ಓಡಾಡಿ ಜನ ಭಯಭೀತರಾಗಿರುವ ಬಗ್ಗೆ ಸಕಲೇಶಪುರ ಸ್ಥಳೀಯ ಮಾಧ್ಯಮಗಳಲ್ಲಿ ಸುದ್ದಿ ಬಿತ್ತರವಾಗಿದ್ದು, ಈ ದಿನ ಸಕಲೇಶಪುರ ವಲಯ ಅರಣ್ಯಧಿಕಾರಿಗಳಾದ ಹೇಮಂತ್ ಕುಮಾರ್ ಸ್ಥಳಕ್ಕೆ ಭೇಟಿ ನೀಡಿ, ಸ್ಥಳ ಪರಿಶೀಲಿಸಿ,ಕಾಫಿ ಕುಯ್ಲು ಸಮಯವಾದ್ದರಿಂದ ಸಾರ್ವಜನಿಕರಿಗೆ ಕಾಡುಕೋಣದಿಂದ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಲು ಸ್ಥಳದಲ್ಲಿ RRT ಸಿಬ್ಬಂದಿಗಳನ್ನು ನಿಯೋಜನೆ ಮಾಡಿ ಜನರ ಆತಂಕವನ್ನು ನಿವಾರಿಸಿದ್ದಾರೆ.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *