
ಹಾಸನ: ರಾಜ್ಯ ಮಟ್ಟದ ವೀರಶೈವ ಲಿಂಗಾಯತ ಸಮಾಜದ ಮಹಾಸಂಗಮ ಸಭೆಯನ್ನು ರಾಜ್ಯ ಮಟ್ಟದ ಮುಖಂಡರು ೨೦೨೫ ಮಾಚ್ ೪ ರಂದು ಮಂಗಳವಾರ ಬೆಳಿಗ್ಗೆ ೧೦-೩೦ಕ್ಕೆ ಬೆಂಗಳೂರು ಅರಮನೆ ಮ್ಯೆದಾನ ಗಾಯಿತ್ರಿ ವಿಹಾರದಲ್ಲಿ ಸಮಾಜದ ಮುಖಂಡರು ಹಾಗೂ ಮಾಜಿ ಸಚಿವರಾದ ಎಂ.ಪಿ. ರೇಣುಕಚಾರ್ಯ ರವರ ನೇತೃತ್ವದಲ್ಲಿ ಸಭೆ ಏರ್ಪಡಿಸಲಾಗಿದೆ.
ಇದೆ ವೇಳೆ ಅಖಿಲ ಭಾರತ ವೀರಶೈವ ಲಿಂಗಾಯಿತ ಮಹಾಸಭಾದ ತಾಲೂಕು ಅಧ್ಯಕ್ಷ ಕಟ್ಟಾಯ ಶಿವಕುಮಾರ್ ಮಾಧ್ಯಮದೊಂದಿಗೆ ಮಾತನಾಡಿ, ಈ ಸಭೆಯಲ್ಲಿ ವೀರಶೈವ ಲಿಂಗಾಯತ ಸಮಾಜದ ಮುಖಂಡರು ವಿವಿದ ಮಠದ ಮಠಾಧೀಶರು ಒಳಗೋಂಡಂತೆ ವೀರಶೈವ ಲಿಂಗಾಯತ ಸಂಘಟನೆ ವಿಚಾರಗಳನ್ನು ಒಳಗೋಂಡಂತೆ ಚರ್ಚಿಸಲು ಸಭೆ ಕರೆಯಲಾಗಿದೆ.
ಈ ಸಭೆಯಲ್ಲಿ ನಮ್ಮ ಹಾಸನ ಜಿಲ್ಲೆಯ ವೀರಶೈವ ಲಿಂಗಾಯತ ಸಮಾಜ ಬಾಂಧವರು, ಮುಖಂಡರು, ಸಮಾಜದ ವಿವಿಧ ಸಂಘ ಸಂಸ್ಥೆಯವರು, ವೀರಶೈವ ಲಿಂಗಾಯತ ಸಮಾಜದ ಚಿಂತಕರು ಭಾಗವಹಿಸಲು ಕೋರಲಾಗಿದೆ.
ಹೆಚ್ಚಿನ ಮಾಹಿತಿಗಾಗಿ ಕಟ್ಟಾಯ ಶಿವಕುಮಾರ್ ಮೊಬೈಲ್ ಸಂಖ್ಯೆ ೯೪೪೮೨೨೦೮೫೦ ಸಂಪರ್ಕಿಸಬಹುದಾಗಿದೆ.
