
ಸಕಲೇಶಪುರ:- ಹೂವು ಎಂದರೆ ಸೌದರ್ಯದ ಪ್ರತೀಕ. ಭಕ್ತಿಯ ಸೂಚಕ ಹಾಗೂ ಪವಿತ್ರತೆಯ ಪ್ರತೀಕ. ಇಂತಹ ಹೂಗಳಲ್ಲಿ ವಿಶೇಷತೆ ಆದಾಗ ಕಂಡುಬರುವುದು ಕೂಡ ಇದೆ. ಇಂತಹ ವಿಸ್ಮಯಗಳು ಜನರಿಗೆ ಅಚ್ಚರಿಯನ್ನು ಉಂಟು ಮಾಡುತ್ತಾವೆ. ಇದೇ ರೀತಿಯ ಪ್ರಸಂಗ ಒಂದು ಪಟ್ಟಣದ ತೇಜಸ್ವಿ ಥಿಯೇಟರ್ ಹತ್ತಿರ ಇರುವ ಎಂ ಆರ್ ಎಫ್ ಟೈಯರ್ ಅಂಗಡಿಯ ಮಾಲೀಕರಾದ ಲೋಹಿತ್ ಅವರ ಮನೆಯಲ್ಲಿ ಬೆಳೆದ ದಾಸವಾಳ ಹೂಲ್ಲಿ ಕಂಡಿಬಂದಿದ್ದು, ನೋಡುಗರ ಅಚ್ಚರಿಗೆ ಪಾತ್ರವಾಗಿದೆ.
ಸಾಮಾನ್ಯವಾಗಿ ದಾಸವಾಳ ಹೂ 4 ಎಸಳುಗಳು ಒಂದೇ ಬಣ್ಣದಿಂದ ಕುಡಿರುತ್ತವೆ. ಅವುಗಳಲ್ಲಿ ಕೆಂಪು, ಹಳದಿ, ಬಿಳಿಯ ಬಣ್ಣಗಳಾಗಿ ಕಾಣಸಿಗುವುದು ಸಾಮಾನ್ಯ. ಆದರೆ ಇವರ ಅಂಗಳದಲ್ಲಿ ಬೆಳೆದಿರುವ ದಾಸವಾಳ ಹೂ 3 ಹೂ ಎಸಳು ಬಿಳಿ ಹಾಗೂ ಒಂದು ಎಸಳು ಕೆಂಪು ಇದ್ದು ಅಚ್ಚರಿಗೆ ಕಾರಣವಾಗಿದೆ.


