ಅರಸೀಕೆರೆ : ತಾಲೂಕಿನ ಮಾಡಾಳು ಗ್ರಾಮದ ಮೂಲಸ್ಥಾನ ಸ್ವರ್ಣಗೌರಮ್ಮ ದೇವಿ ದೇವಾಲಯದ ಆವರಣದಲ್ಲಿ ಹಾರನಹಳ್ಳಿ ಕ್ಷೇತ್ರ ಕೋಡಿಮಠದ ಜಗದ್ಗುರು ಡಾ ಶ್ರೀ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿಯವರ ಸಾನಿಧ್ಯದಲ್ಲಿ ನಡೆದ ಲಿಂಗೈಕ್ಯ ಪರಮಪೂಜ್ಯ ಶಿವಲಿಂಗ ಸ್ವಾಮೀಜಿಯವರ 138ನೇ ವರ್ಷದ ಪುಣ್ಯ ಸಂಸ್ಮರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು

ವ್ಯಕ್ತಿ ಎಷ್ಟು ವರ್ಷ ಬದುಕಿದ್ದನುಎನ್ನುವುದಕ್ಕಿಂತಹೇಗೆ ಬದುಕಿದಎನ್ನುವುದು ಗಮನಾರ್ಹಜಾತಿ ಮತ ಭೇದ ಎನ್ನದೆಎಲ್ಲರನ್ನೂ ಪ್ರೀತಿ ವಿಶ್ವಾಸಗಳಿಸಿಕೊಂಡು 87 ವರ್ಷ ಎಲ್ಲರಿಗೂ ಆದರ್ಶಪ್ರಾಯವಾಗಿಬದುಕಿಯೋಗ ಸಮಾಧಿಯಲ್ಲಿಲೀನವಾಗಿ ಈಗಲೂ ಅವರ ಕಷ್ಟ ಕಾರ್ಪಣ್ಯಗಳನ್ನು ಪರಿಹರಿಸುತ್ತಿರುವಮಹಾಯೋಗಿ ಶಿವಲಿಂಗ ಸ್ವಾಮಿಗಳು ಎಂದು ಅವರು ಹೇಳಿದರು

ಧಾರ್ಮಿಕ ಕಾರ್ಯಕ್ರಮವನ್ನು ಜಗದ್ಗುರು ಶ್ರೀ ಶಿವಾನಂದ ಶಿವಯೋಗಿ ರಾಜೇಂದ್ರ ಮಹಾಸ್ವಾಮಿಗಳು ಕಾರ್ಯಕ್ರಮ ವನ್ನು ಉದ್ಘಾಟಿಸಿದರು

ಕಾರ್ಯಕ್ರಮಕ್ಕೆ ಮುನ್ನ ಹಾರನಹಳ್ಳಿಯಿಂದ ಆಗಮಿಸಿದ ಶ್ರೀಗಳವರನ್ನು ನೂರಾರು ಮಹಿಳೆಯರು ಆರತಿ ಬೆಳಗಿ ವೇದಿಕೆಗೆ ಕರೆದೊಯ್ದರು ಮತ್ತು ರಾಂಪುರ ನಿರ್ವಾಣ ಸಿದ್ದೇಶ್ವರ ಭಜನಾ ಮಂಡಳಿಯವರು ಕೀರ್ತನೆ ಹಾಡಿದರು

ಕುಮಾರಿ ಶಿವಾನಿ ಗೌರಮ್ಮ ಸೇವಾ ಸಮಿತಿ ಅಧ್ಯಕ್ಷ ಎಂಎಸ್ ನಟರಾಜ್ ಗೌರವಾಧ್ಯಕ್ಷ ಮಲ್ಲಿಕಾರ್ಜುನಪ್ಪ ಮುಖಂಡರಾದ ಎಚ್ ಪಿ ಬಸವಲಿಂಗಪ್ಪ ಕೋಡಿಮಠ ಏಜೆಂಟ್ ಮಹದೇವಯ್ಯ ಮಹಾದೇವಪ್ಪ ಹಿರಿಯ ಪತ್ರಕರ್ತ I ಶಿವಲಿಂಗಪ್ಪ ಎಂಡಿ ಸೋಮಶೇಖರ್ ಕೊಡ್ಲಿ ಬಸವರಾಜ್ ಎಂ ಸಿ ನಟರಾಜ್ ಶಂಕರಪ್ಪ ಅಶೋಕ್ ಮಾಡಳು ಚಂದ್ರಪ್ಪ ದಾಸಪ್ಪ ಮುಂತಾದವರಿದ್ದರು

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *