
ಆಲೂರು :ಹೇಮಾವತಿ ಹಿನ್ನಿರಿಗೆ ಹಾರಿ 28 ವರ್ಷದ ನಿರಂಜನ್ ಸಾವು ಸಾಲಕ್ಕೆ ಹೆದರಿ 28 ವರ್ಷದ ನಿರಂಜನ್ ಹೇಮಾವತಿ ಹಿಂಭಾಗದ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ
ಆಲೂರು ತಾಲ್ಲೂಕಿನ ಕುಂದೂರು ಗ್ರಾಮದ ನಿರಂಜನ್ ಆತ್ಮಹತ್ಯೆ ಮಾಡಿಕೊಂಡ ಯುವಕ ತಮ್ಮ ಜಮೀನಿನಲ್ಲಿ ಬೆಳೆ ಬೆಳೆಯಲು ಸ್ನೇಹಿತರ ಬಳಿ, ಬ್ಯಾಂಕ್ ಮತ್ತು ಫೈನಾನ್ಸ್ ಸಾಲ ಹಾಗೂ ಚಿನ್ನಅಡಮಾನವಿಟ್ಟು ಸಾಲ ಪಡೆದು ಬೆಳೆ ಸರಿಯಾಗಿ ಬಾರದೆ ನಷ್ಟವಾದಿದ್ದರಿಂದ ಬೇಸತ್ತು ಹೇಮಾವತಿ ಶೆಟ್ಟಿಹಳ್ಳಿಯಲ್ಲಿ ಸೇತುವೆ ಹತ್ತಿರ ಬೈಕ್ ನಿಲ್ಲಿಸಿ ಹೇಮಾವತಿ ಹಿನ್ನಿರಿನಲ್ಲಿ ಮುಳುಗಿ ಸಾವನ್ನಾಪ್ಪಿರುವುದಾಗಿ ತಿಳಿದು ಬಂದಿದೆ
ಅತಿಯಾದ ಸಾಲದಿಂದ ಹೇಮಾವತಿ ಹಿನ್ನಿರಿಗೆ ಹಾರಿ ಸಾವನ್ನಪ್ಪಿರುವುದಾಗಿ ಮೃತನ ಪತ್ನಿ ನಿತ್ಯಾಶ್ರೀ ಆಲೂರು ಪೊಲೀಸ್ ಠಾಣೆಗೆ ದೂರನ್ನು ನೀಡಿದ್ದಾರೆ..