ಸಕಲೇಶಪುರ : “ಸರ್ಕಾರದ ಅನುದಾನದಡಿ ನಿರ್ಮಿಸಿದ್ದ ಮನೆಯನ್ನು ನೆಲಸಮಗೊಳಿಸಿ. ಸರ್ಕಾರಕ್ಕೆ ಮುಜುಗರ ತಂದಿರುವ ಯಸಳೂರು ವಲಯಾರಣ್ಯಾಧಿಕಾರಿಗಳಾದ ಕೃಷ್ಣರವರ ಮೇಲೆ ಕ್ರಮ ಜರುಗಿಸುವ ಬಗ್ಗೆ.

ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ, ಶೋಭರಾಜ್ ರವರು ಕಳೆದ 6 ವರ್ಷಗಳಿಂದಲೂ ಯಸಳೂರು ವ್ಯಾಪ್ತಿಯ ಯಸಳೂರು ಸ.ನಂ. 361 ರಲ್ಲಿ 2021-22 ನೇ ಸಾಲಿನಲ್ಲಿ ಡಾ।।ಬಿ.ಆರ್ ಅಂಬೇಡ್ಕ‌ರ್ ವಸತಿ ಯೋಜನೆ” ಯಡಿಯಲ್ಲಿ ತನ್ನ ಪತ್ನಿ ಪ್ರಿಯಾ ಡಿ.ಕೆ ರವರ ಹೆಸರಿನಲ್ಲಿ ಸರ್ಕಾರದ ಅನುದಾನ ಪಡೆದು ಮನೆ ನಿರ್ಮಿಸಿಕೊಂಡು ವಾಸಿಸುತ್ತಿದ್ದು, ಅರಣ್ಯ ಇಲಾಖೆಯ ಮರಗಳನ್ನು ಕಡಿದಿದ್ದಾನೆಂದು ನೆಪವೊಡ್ಡಿ ದಿನಾಂಕ: 03-07-2025ರಂದು ಸಂಜೆ ಮನೆಗೆ ಬಂದು ರಕ್ತ ಬರುವಂತೆ ಹೊಡೆದು, ಕರೆದುಕೊಂಡು ಹೋಗಿ ಮುಚ್ಚಳಿಕೆ ಬರೆಸಿ ವಾಪಾಸ್ಸು ಕಳಿಸಿ, ದಿನಾಂಕ:04-07-2025 ರಂದು ಅರಣ್ಯ ಇಲಾಖಾಧಿಕಾರಿಗಳಾದ ಕೃಷ್ಣರವರು ತನ್ನ ಇಲಾಖೆಯ ಸಿಬ್ಬಂದಿಗಳೊಂದಿಗೆ ಜೆ.ಸಿ.ಬಿ ತೆಗೆದುಕೊಂಡು ಹೋಗಿ ಮನೆಯನ್ನು ನೆಲಸಮಗೊಳಿಸಿರುತ್ತಾರೆ.

ಮನೆ ಕೆಡವಿ ” ನಾನು ಸರ್ಕಾರದ ಸಹಾಯಧನ ಪಡೆದು, ಅದಕ್ಕೆ ಕೂಲಿ ಮಾಡಿ, ಸಾಲ ಮಾಡಿ ಹಣ ಕೂಡಿಸಿ ಮಾಡಿದ್ದ ಮನೆಯನ್ನು ಕೆಡವಿ ಸರ್ಕಾರಕ್ಕೆ ಮುಜುಗರ ತಂದಿರುತ್ತಾರೆ.

ಈ ಬಗ್ಗೆ ಪೊಲೀಸ್ ಠಾಣೆಯಲ್ಲಿ ದಿನಾಂಕ: 04-07-2025 ರಂದು ದೂರನ್ನು ಕೂಡ ದಾಖಲು ಮಾಡಿರುತ್ತಾರೆ ಮತ್ತು ಕೇಳಲು ಹೋದ ಮುಖಂಡರ ಮೇಲೂ RFO ರವರು ಪ್ರಕರಣ ದಾಖಲಿಸಿರುತ್ತಾರೆ.

ಈ ಎಲ್ಲಾ ಘಟನೆಗಳಿಂದ ಸರ್ಕಾರಕ್ಕೆ ಮುಜುಗರ ತಂದಿದ್ದು, ಸರ್ಕಾರಕ್ಕೆ ಕೆಟ್ಟ ಹೆಸರನ್ನು ತರಬೇಕೆಂಬ ಉದ್ದೇಶದಿಂದಲೇ ದಲಿತರ ಮೇಲೆ ದೌರ್ಜನ್ಯ ವೆಸಗಿದ್ದಾರೆ. ಇವರ ಮೇಲೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು. ಅರಣ್ಯ ಇಲಾಖೆ ಸಚಿವರಿಗೆ ಮನವಿ ಸಲ್ಲಿಸಿದ್ದಾರೆ.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *