ಸಕಲೇಶಪುರ : ಇತಿಹಾಸ ವಿಭಾಗ ಮತ್ತು ಐಕ್ಯೂಎಸಿ ಸಹಯೋಗದೊಂದಿಗೆ ಡಾ. ವಿದ್ಯಾ ಎಚ್ಎನ್( ನಿ ) ಇತಿಹಾಸ ಪ್ರಾಧ್ಯಾಪಕರು ಸರ್ಕಾರಿ ಗೃಹ ವಿಜ್ಞಾನ ಕಾಲೇಜು ಹಾಸನ, ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಸಕಲೇಶಪುರ ಇಲ್ಲಿಯ ಇತಿಹಾಸ ವಿಭಾಗ ಮತ್ತು ಐಕೇಸಿ ಸಹಯೋಗದೊಂದಿಗೆ ಇಂದು ದಿನಾಂಕ 19-09-2025 ರಂದು ಬೆಳಗ್ಗೆ 11 ಗಂಟೆಗೆ ವೀರ ವನಿತೆಯರ ರಾಣಿ ಅಬ್ಬಕ್ಕ ಲೋಕಮಾತ ದೇವಿ ಅಹಲ್ಯ ಬಾಯಿ ಇವರ ಬಗ್ಗೆ ವಿಶೇಷ ಉಪನ್ಯಾಸ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು ಸಂಪನ್ಮೂಲ ವ್ಯಕ್ತಿಗಳಾಗಿ ಡಾ. ವಿದ್ಯಾ. ಎಚ್ಎನ್ ಪ್ರೊಫೆಸರ್ ನಿವೃತ್ತಿ ಇತಿಹಾಸ ವಿಭಾಗ ಸರ್ಕಾರಿ ಗೃಹ ವಿಜ್ಞಾನ ಕಾಲೇಜು ಹಾಸನ ಇವರು ಆಗಮಿಸಿ ವಿದ್ಯಾರ್ಥಿಗಳಿಗೆ ವೀರ ವನಿತೆಯರ ರಾಣಿ ಅಬಕ ರವರ ದೈರ್ಯದಿಂದ ಎದುರಿಸಿದ್ದ ಸವಾಲುಗಳ ಬಗ್ಗೆ ವಿವರಿಸಿದರೂ ಅದು ಇತ್ತೀಚಿನ ದಿನಗಳಲ್ಲಿ ಯುವ ಪೀಳಿಗೆಯವರು ಕೂಡ ಈ ರೀತಿಯಾದಂತಹ ಧೈರ್ಯವನ್ನು ಬಂದಂತಹ ಸಮಸ್ಯೆಗಳನ್ನು ಬಗೆಹರಿಸಬೇಕು ಎಂದು ವಿಚಾರಗಳನ್ನು ಮನದಟ್ಟು ಮಾಡಿ ಕೊಟ್ಟರು

ಲೋಕಮಾತೆ ದೇವಿ ಅಹಲ್ಯ ಬಾಯಿ ರವರು ಅವರಲ್ಲಿ ಇದ್ದ ಸೇವಾ ಮನೋಭಾವದ ಬಗ್ಗೆ ತಿಳಿಸಿ ಹಾಗೂ ಈಗಿನ ಯುವ ಪೀಳಿಗೆಯವರು ಈ ರೀತಿಯಾದಂತಹ ಬದುಕನ್ನ ನಡೆಸಬೇಕೆಂದು ಕಿವಿ ಮಾತನ್ನು ಹೇಳಿದರು ಹಾಗೂ ಕಿತ್ತೂರಾಣಿ ಚೆನ್ನಮ್ಮ ರವರು ಧೈರ್ಯದಿಂದ ಬಂದಂತಹ ಸಮಸ್ಯೆಗಳನ್ನು ಎದುರಿಸುವುದು ಹೇಗೆ ಎನ್ನುವುದರ ಬಗ್ಗೆ ವಿಚಾರವನ್ನು ಯುವ ಪೀಳಿಗೆಯವರಿಗೆ ತಿಳಿಸಿದರು

ಯುವ ಪೀಳಿಗೆಯವರು ಧೈರ್ಯದಿಂದ ಸೇವಾ ಮನೋಭಾವದಿಂದ ಹಾಗೂ ಬಂದಂತಹ ಸಮಸ್ಯೆಗಳನ್ನು ಸರಿಯಾದ ರೀತಿಯಲ್ಲಿ ಬಗೆಹರಿಸಿಕೊಂಡು ಬದುಕಬೇಕು ಎಂದು ವಿಚಾರಗಳನ್ನು ಮನದಟ್ಟು ಮಾಡಿಕೊಟ್ಟರು

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *