ಅರಸೀಕೆರೆ ತಾಲೂಕಿನ ಕಣಕಟ್ಟೆ ಹೋಬಳಿಯಲ್ಲಿ ಭಾನುವಾರ ರಾತ್ರಿ ಸುರಿದ ಭಾರಿ ಮಳೆಗೆ ಸುಮಾರು ಹತ್ತಕ್ಕೂ ಹೆಚ್ಚು ಗ್ರಾಮಗಳ ಕೆರೆಗಳ ಕೋಪಡಿ ಬಿದ್ದಿದ್ದು ತೆಂಗಿನ ತೋಟಗಳು ಜಲಾವೃತಗೊಂಡಿದ್ದು,ರೈತರು ಸಂತಸ ವ್ಯಕ್ತಪಡಿಸಿದ್ದಾರೆ.

ಕಣಕಟ್ಟೆ ಹೋಬಳಿಯ ಹಿರೇ ಹಳ್ಳ ಉಕ್ಕಿ ಹರಿಯುತ್ತಿದ್ದು ಹಳ್ಳದ ಎರಡು ಭಾಗದಲ್ಲಿರುವ ತೆಂಗಿನ ತೋಟಗಳು ಜಲಾವೃತಗೊಂಡಿವೆ ಅಲ್ಲದೆ ಈ ಹಳ್ಳದ ದಡದಲ್ಲಿರುವ ವೈಜೀಹಳ್ಳಿಶ್ರೀ ಬಸವೇಶ್ವರ ದೇವಾಲಯದ ಬಳಿ ಹಾಗೂ ‘ಸರ್ಕಾರಿ ಶಾಲೆಯವರೆಗೂ ನೀರು ರಭಸವಾಗಿ ಹರಿಯುತ್ತಿದೆ ಹಳ್ಳದ ಪ್ರವಾಹವನ್ನು ನೋಡಲು ಮಾಡಾಳು ವೈಚಿಹಳ್ಳಿ ದಿಬ್ಬೂರಿನ ಜನರು ಇಲ್ಲಿಗೆ ಭೇಟಿ ನೀಡಿ ಕಣ್ತುಂಬಿಕೊಂಡು ಬಾರಿ ಸಂತಸ ವ್ಯಕ್ತಪಡಿಸುತ್ತಿದ್ದಾರೆ

2021 ರಲ್ಲಿ ಇದೇ ಅವಧಿಯಲ್ಲಿ ಹಳ್ಳ ಪ್ರವಾಹ ಬಂದಿದ್ದು ಎಂದು ಅನೇಕ ರೈತರು ಮಾತನಾಡುತ್ತಿದ್ದರು ಹರಿಯುವ ನೀರಿನಲ್ಲಿ ಜನರು ಹಾಗೂ ಚಿಕ್ಕ ಮಕ್ಕಳು ನೀರಿನಲ್ಲಿ ಓಡಾಡುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು

ಬಿ ಎಂ ಕುರ್ಕೆ ಹೊಸಕೆರೆ ಸೊಪ್ಪಿನ ಹಳ್ಳಿ ಚಿಕ್ಕಂಡಿಹಳ್ಳಿ ದಿಬ್ಬೂರಳ್ಳ ಯರೇಹಳ್ಳಿ ಕೆರೆ ದಳವಾಯಿ ಕೆರೆ ಮಾಡಾಳುಕೆರೆ ಕಡಲ ಮಗೆ ಕೆರೆ ಮುಂತಾದ ಕೆರೆಗಳು ಕೋಡಿಬಿದ್ದಿವೆ ಕಳೆದ ಮೂರು ನಾಲ್ಕು ವರ್ಷಗಳಿಂದ ಮಳೆ ಇಲ್ಲದೆ ಬಾಡಿ ಹೋಗಿದ್ದ ತೆಂಗಿನ ತೋಟಗಳಿಗೆ ಈ ವರ್ಷ ಬಿದ್ದಿರುವ ಮಳೆಯಿಂದ ಜೀವ ಕಳೆ ಬಂದಿದ್ದು ರೈತರುಭಾರಿ ಹರ್ಷ ವ್ಯಕ್ತಪಡಿಸಿದ್ದಾರೆ

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *